Annabhagya yojana latest news- ಅನ್ನಭಾಗ್ಯ ಹಣ ಬಿಡುಗಡೆ ಕುರಿತು ಮಹತ್ವದ ಬದಲಾವಣೆ!

September 5, 2024 | Siddesh

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ(Annabhagya yojana latest news) ಈ ಹಿಂದೆ ಅಕ್ಕಿ ಬದಲು ಹಣವನ್ನು ನೀಡಲಾಗುತಿತ್ತು ಈ ಕುರಿತು ರಾಜ್ಯ ಸರಕಾರದಿಂದ ಮಹತ್ವದ ಬದಲಾವಣೆ ಮಾಡಲಾಗಿದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ(Ahara elake) ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ ಇದೆ ರೀತಿ ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಲಭ್ಯವಿಲ್ಲದ ಕಾರಣ 5 ಕೆಜಿ ಅಕ್ಕಿ ಬದಲು ಹಣವನ್ನು ನೀಡಲಾಗುತಿತ್ತು.

ಇನ್ನು ಮುಂದೆ 5 ಕೆಜಿ ಅಕ್ಕಿ ಬದಲು ಹಣವನ್ನು ನೀಡುವುದಿಲ್ಲ ಕಾರಣವೇನು? ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸುವುದರ ಹಿಂದಿನ ಕಾರಣದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Tailoring training-2024: ಟೈಲರಿಂಗ್ ಉದ್ಯಮ ಸ್ಥಾಪನೆ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ!

Karnataka food department-ಪ್ರಸ್ತುತ ರೇಷನ್ ಕಾರ್ಡ ಕುರಿತು ಅಂಕಿ-ಸಂಖ್ಯೆ ವಿವರಗಳು:

ಪ್ರಸ್ತುತ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ರೇಷನ್ ಕಾರ್ಡಗಳ ಅಂಕಿ-ಸಂಖ್ಯೆಯ ವಿವರ ಈ ಕೆಳಗಿನಂತಿದೆ:

1) ಒಟ್ಟು BPL ಕಾರ್ಡದಾರರು: 13 ಲಕ್ಷ
2) Total Members- 5,17,81,138
3) AAY Card- 43,40,813
4) PHH Card- 3,90,78,483
5) NPHH Card- 83,61,842
6) 29 ವಯಸ್ಸಿನ ಒಳಗಿರುವವರ ಸಂಖ್ಯೆ- 1,97,55,733
7) 30-75 ವಯಸ್ಸಿನ ಸದಸ್ಯರ ಸಂಖ್ಯೆ- 2,91,89,829
8) 75 ವರ್ಷ ಮೇಲ್ಪಟ್ಟ ವಯಸ್ಸಿನ ಸದಸ್ಯರ ಸಂಖ್ಯೆ- 16,64958

ಇದನ್ನೂ ಓದಿ: ಪಂಜಾಬ್ & ಸಿಂಧ್ ಬ್ಯಾಂಕ್ ನಲ್ಲಿ ವಿವಿಧ 200ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ! Punjab & Sind Bank Recruitment 2024

Annabhagya amount- ಅನ್ನಭಾಗ್ಯ ಯೋಜನೆಯಡಿ ಎಷ್ಟು? ಹಣ ನೀಡಲಾಗುತಿತ್ತು?

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಒಂದ ಭಾಗವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಸರಕಾರದಿಂದ ಘೋಷಣೆ ಮಾಡಿರುವುದರ ಪ್ರಕಾರವಾಗಿ 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜೆ ಅಕ್ಕಿಗೆ 34 ರೂ ರಂತೆ ಒಟ್ಟು 170 ರೂ ಹಣವನ್ನು(akki hana) ನೇರ ನಗದು ವರ್ಗಾವಣೆ(DBT) ಮೂಲಕ ಅರ್ಹ ಪಡಿತರ ಚೀಟಿ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತಿತ್ತು.

Annabhagya akki vitarane-ಅಕ್ಕಿ ವಿತರಣೆಗೆ ಬೇಕು 20 ಸಾವಿರ ಮೆಟ್ರಿಕ್ ಟನ್!

ಈ ಯೋಜನೆಯಡಿ ಸರಕಾರದಿಂದ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಮಾಡಲು ಪ್ರತಿ ತಿಂಗಳಿಗೆ ಒಟ್ಟು 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದಾರೆ.

ಇದನ್ನೂ ಓದಿ: Grama panchayath helpline- ಗ್ರಾಮ ಪಂಚಾಯತಿಯ ಎಲ್ಲಾ ಸೌಲಭ್ಯದ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ!

Annabhaya rice- ಅಕ್ಕಿ ಕೊಡಲು ಒಪ್ಪಿಗೆ ನೀಡಿದ ಬೆನ್ನಲ್ಲೇ ಹಣ ವರ್ಗಾವಣೆ ನಿಲ್ಲಿಸಲಾಗಿದೆ:

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಘೋಷಣೆ ನೀಡಲಾಗಿತ್ತು ಇದರಂತೆ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಚಾಲ್ತಿಗೆ ತರಲಾಗಿತ್ತಾದರು ಅಕ್ಕಿ ದಾಸ್ತಾನು ಕೊರತೆ ಇದ್ದಿದರಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗಿರುವುದಿಲ್ಲ.

5 ಕೆಜಿ ಅಕ್ಕಿ ನೀಡಿ ಇನ್ನು 5 ಕೆಜಿ ಅಕ್ಕಿ ಬದಲು ಹಣವನ್ನು ಜಮಾ ಮಾಡುತಿತ್ತು ಅದರೆ ಈಗ ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾ(FCI) ದಿಂದ  28 ರೂ ಗೆ ಅಕ್ಕಿ ಕೊಡಲು ಒಪ್ಪಿಗೆ ನೀಡಿರುವುದರಿಂದ ಇನ್ನು ಮುಂದೆ ರೇಷನ್ ಕಾರ್ಡದಾರರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಈ ಕಾರಣದಿಂದ ಹಣ ವರ್ಗಾವಣೆ ಸ್ಥಗಿತ ಮಾಡಲಾಗಿದೆ.

ಇದನ್ನೂ ಓದಿ: Gas Authority jobs-ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ!

ration card website- ಅಧಿಕೃತ ವೆಬ್ಸೈಟ್

ಈ ಲಿಂಕ್ Click here ಮೇಲೆ ಕ್ಲಿಕ್ ಮಾಡಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ನಿಮ್ಮ ರೇಷನ್ ಕಾರ್ಡ ಕುರಿತು ಸಂಪೂರ್ಣ ವಿವರವನ್ನು ಮನೆಯಲ್ಲೇ ಕುಳಿತು ಬೆರಳ ತುದಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: