Parihara amount-2024: ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ!

January 1, 2024 | Siddesh
Parihara amount-2024: ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ!
Share Now:

ಇಲ್ಲಿಯವರೆಗೆ ಒಂದು ಕಂತು ಸಹ ಬರ ಪರಿಹಾರದ ಹಣವನ್ನು(Parihara amount-2024) ಪಡೆಯದಿರುವ ರೈತರು ಯಾವ ಕ್ರಮ ಅನುಸರಿಸಿ ಪರಿಹಾರದ ಹಣವನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

2023ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೀಕರ ಬರಗಾಲದಿಂದ ರೈತರಿಗೆ ಅಗಿರುವ ನಷ್ಟಕ್ಕೆ ಅರ್ಥಿಕವಾಗಿ ನೆರವು ನೀಡಲು NDRF ಮಾರ್ಗಸೂಚಿಯ ಪ್ರಕಾರ ರಾಜ್ಯ ಮತ್ತು ಕೇಂದ್ರದಿಂದ ಇಲ್ಲಿಯವರೆಗೆ ಎರಡು ಕಂತು ಬರ ಪರಿಹಾರ(Bara parihara hana) ಜಮಾ ಮಾಡಲಾಗಿದೆ.

ಇನ್ನು ಅನೇಕ ಜಿಲ್ಲೆಗಳಲ್ಲಿ ತಾಂತ್ರಿಕ ಕಾರಣಗಳಿಂದ ಹಲವು ರೈತರಿಗೆ ಬರ ಪರಿಹಾರದ ಹಣ ಜಮಾ ಅಗಿರುವುದಿಲ್ಲ ಇದಕ್ಕೆ ಸೂಕ್ತ ಕಾರಣಗಳೇನು? ಮತ್ತು ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: RTC adhar link-2024: ರೈತರು ಸರಕಾರದ ಯಾವುದೇ ಸೌಲಭ್ಯ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ:

ಮೊದಲಿಗೆ ಇಲ್ಲಿಯವರೆಗೆ ಒಂದು ಕಂತು ಸಹ ಪರಿಹಾರದ ಹಣ ಪಡೆಯದ ರೈತರು ಒಮ್ಮೆ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇರವಾಗಿ ನಿಮ್ಮ ಆಧಾರ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಸರ್ವೆ ನಂಬರ್ ವಿವರ ಸಹಿತ ಭೇಟಿ ಮಾಡಿ ಯಾವ ಕಾರಣಕ್ಕೆ ನಿಮಗೆ ಪರಿಹಾರದ ಹಣ ಜಮಾ ಅಗಿಲ್ಲ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬೇಕು.

ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದೆ ಇದ್ದಲ್ಲಿ ಆಧಾರ್ ಲಿಂಕ್ ಮಾಡಿಕೊಳ್ಳುವುದು, ಮತ್ತು FID ಅಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳು ಸೇರ್ಪಡೆ ಅಗಿವೆಯೇ ಎಂದು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬೇಕು.

ಇದಲ್ಲದೇ ಬ್ಯಾಂಕ್ ಖಾತೆಯ ಹೆಸರು ಮತ್ತು ಆಧಾರ್ ಕಾರ್ಡ ನಲ್ಲಿರುವ ಹೆಸರು ತಾಳೆ ಅಗದೇ ಅನೇಕ ರೈತರಿಗೆ ಪರಿಹಾರದ ಹಣ ಜಮಾ ಅಗಿರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು ಅದ ಕಾರಣ ರೈತರು ತಮ್ಮ ಬ್ಯಾಂಕ್ ಪಾಸ್ ಬುಕ್ ನಲ್ಲಿ ಆಧಾರ್ ಕಾರ್ಡನಲ್ಲಿರುವಂತೆಯೇ ಹೆಸರು ಇದಿಯಾ ಎಂದು ಚೆಕ್ ಮಾಡಿ ಒಂದೊಮ್ಮೆ ತಪ್ಪಿದರೆ ಆಧಾರ್ ಕಾರ್ಡ ನಲ್ಲಿರುವಂತೆ ಬ್ಯಾಂಕ್ ಖಾತೆಯ ಹೆಸರನ್ನು ತಿದ್ದುಪಡಿ ಮಾಡಿಸಬೇಕು ಬ್ಯಾಂಕ್ ಶಾಖೆ ಭೇಟಿ ಮಾಡಿ.

ಇದನ್ನೂ ಓದಿ: How to link pan card aadhar card: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರಿಗೆ ಶಾಕಿಂಗ್ ನ್ಯೂಸ್!

Parihara village wise farmers list-ಮೊಬೈಲ್ ನಲ್ಲಿ ಇಲ್ಲಿಯವರೆಗೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ ಮತ್ತು ಕಾರಣವನ್ನು ತಿಳಿಯುವ ವಿಧಾನದ ಮಾಹಿತಿ:

ಮೊಬೈಲ್ ಬಳಕೆಯ ಬಗ್ಗೆ ಮಾಹಿತಿಯಿರುವ ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಬರ ಪರಿಹಾರ ಜಮಾ ಅಗದ ರೈತರ ಪಟ್ಟಿಯನ್ನು ನೋಡಬಹುದು.

Step-1: ಮೊದಲಿಗೆ ಈ Parihara farmer list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ "Village Wise List" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Crop insurance-2024:ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು?ಸಂಪೂರ್ಣ ವಿವರ ಬಿಡುಗಡೆ!

Step-3: ಈ ಪೇಜ್ ನಲ್ಲಿ ವರ್ಷ: 2023-24 , Select season/ಋತು: ಮುಂಗಾರು, Calamity Type/ವಿಪತ್ತಿನ ವಿಧ: ಬರ/Drought ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು,ಹೋಬಳಿ,ಹಳ್ಳಿಯನ್ನು ಸೆಲೆಕ್ಟ್ ಮಾಡಿ ಕೆಳಗೆ ಕಾಣುವ "Payment Failed Cases/ಪಾವತಿ ವಿಫಲ ಪ್ರಕರಣಗಳು" ಈ ಬಟನ್ ಮೇಲೆ ಕ್ಲಿಕ್ ಮಾಡಿ "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ಬರ ಪರಿಹಾರ ಜಮಾ ಅಗದ ನಿಮ್ಮ ಹಳ್ಳಿಯ ರೈತರ ಪಟ್ಟಿ ಮತ್ತು ಪರಿಹಾರ ಜಮಾ ಅಗದಿರಲು ಕಾರಣದ ವಿವರ ತೋರಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: