land registration- ಜಮೀನಿನ ಮಾಲೀಕ ಮರಣ ಹೊಂದಿದ ನಂತರ ವಾರಸುದಾರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ?

ನಮ್ಮ ರಾಜ್ಯದ ಬಹುತೇಕ ಕೃಷಿ ಕುಟುಂಬದ ಸಮಸ್ಯೆಯೆಂದರೆ ಅನೇಕ ವರ್ಷಗಳಿಂದ ತಾವು ಜಮೀನು ಉಳುಮೆ ಮಾಡಿಕೊಂಡು ಬರುತ್ತಿದ್ದರು ಆ ಜಮೀನು ಪ್ರಸ್ತುತ ಕೃಷಿ ಮಾಡುತ್ತಿರುವ ವ್ಯಕ್ತಿಯ ಹೆಸರಿಗೆ ಇಲ್ಲದೇ ಇರುವುದು ದೊಡ್ಡ ದುರಂತವೇ ಅಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಕುಟುಂಬದ ಹಿರಿಯ ವ್ಯಕ್ತಿಯ ಹೆಸರಿನಲ್ಲಿರುವ ಜಮೀನನ್ನು(How to transfer ownership of agricultural land) ಪ್ರಸ್ತುತ ಕೃಷಿ ಮಾಡುತ್ತಿರುವ ವ್ಯಕ್ತಿಯ ಹೆಸರಿಗೆ ಯಾವೆಲ್ಲ ವಿಧಾನವನ್ನು ಅನುಸರಿಸಿ ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

land registration- ಜಮೀನಿನ ಮಾಲೀಕ ಮರಣ ಹೊಂದಿದ ನಂತರ ವಾರಸುದಾರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ?
land registration process-2024

ನಮ್ಮ ರಾಜ್ಯದ ಬಹುತೇಕ ಕೃಷಿ ಕುಟುಂಬದ ಸಮಸ್ಯೆಯೆಂದರೆ ಅನೇಕ ವರ್ಷಗಳಿಂದ ತಾವು ಜಮೀನು ಉಳುಮೆ ಮಾಡಿಕೊಂಡು ಬರುತ್ತಿದ್ದರು ಆ ಜಮೀನು ಪ್ರಸ್ತುತ ಕೃಷಿ ಮಾಡುತ್ತಿರುವ ವ್ಯಕ್ತಿಯ ಹೆಸರಿಗೆ ಇಲ್ಲದೇ ಇರುವುದು ದೊಡ್ಡ ದುರಂತವೇ ಅಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಕುಟುಂಬದ ಹಿರಿಯ ವ್ಯಕ್ತಿಯ ಹೆಸರಿನಲ್ಲಿರುವ ಜಮೀನನ್ನು(How to transfer ownership of agricultural land) ಪ್ರಸ್ತುತ ಕೃಷಿ ಮಾಡುತ್ತಿರುವ ವ್ಯಕ್ತಿಯ ಹೆಸರಿಗೆ ಯಾವೆಲ್ಲ ವಿಧಾನವನ್ನು ಅನುಸರಿಸಿ ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದಲ್ಲದೇ ತಮ್ಮ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಕೊಳ್ಳುವುದರಿಂದ ಅಗುವ ಪ್ರಯೋಜನಗಳೇನು? ಇತ್ಯಾದಿ ಮಾಹಿತಿಯನ್ನು ಸಹ ಈ ಕೆಳಗೆ ವಿವರಿಸಲಾಗಿದೆ. ಹಲವು ಕುಟುಂಬದಲ್ಲಿ ಹಿರಿಯರು ಮರಣ ಹೊಂದಿದ ಬಳಿಕ ನಂತರದ ಆ ಜಮೀನಿನ ವಾರಸುದಾರರಿಗೆ ಆಸ್ತಿಯನ್ನು ಭಾಗ ಮಾಡಿಕೊಳ್ಳಲು ಅನೇಕ ಅಡಚಣೆಗಳು ಬರುತ್ತವೆ ಆಸ್ತಿ ವಿಭಜನೆ/ವಿಭಾಗ/ವರ್ಗಾವಣೆಯ ಕುರಿತು ಕುಟುಂಬದಲ್ಲಿ ಒಡಕು, ಅಣ್ಣ-ತಮ್ಮಂದಿರ ಜಗಳ, ಮರಣ ಹೊಂದಿರುವ ವ್ಯಕ್ತಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಹೆಂಡತಿಯರು ಇರುವುದು ಇತ್ಯಾದಿ ಕಾರಣಗಳು.

ಎಲ್ಲಾ ಬಗ್ಗೆಯ ಪ್ರಕರಣಗಳಿಗೆ ಕಾನೂನಿನಲ್ಲಿ ಸೂಕ್ತ ನಿರ್ದೇಶನಗಳಿದ್ದು ಭೂ ವಿವಾಧ ಯಾವುದೇ ರೀತಿಯಲ್ಲಿದ್ದರು ಪರಿಹಾರ ಮಾರ್ಗವಿದೆ ಅದರೆ ಮಾಹಿತಿ/ತಿಳುವಳಿಕೆ ಕೊರತೆಯಿಂದಾಗಿ ತಮ್ಮ ತಮ್ಮ ಹೆಸರಿಗೆ ಜಮೀನನ್ನು ವರ್ಗಾವಣೆ/ಭಾಗ ಮಾಡಿಕೊಳ್ಳದೆ ಅನೇಕ ವರ್ಷಗಳು ಹಾಗೆಯೇ ಬಿಟ್ಟು ತೊಂದರೆಯನ್ನು ಅನುಭವಿಸುತ್ತಾರೆ.

ಇದನ್ನೂ ಓದಿ: Bele parihara amount- ಈ ತಪ್ಪು ಮಾಡಿದರೆ ನಿಮ್ಮ ಖಾತೆಗೆ ಬರುವುದಿಲ್ಲ ಬರ ಪರಿಹಾರ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Agriculture land registration process in karnataka: ಜಮೀನಿನ ಮಾಲೀಕ ಮರಣ ಹೊಂದಿದ ನಂತರ ವಾರಸುದಾರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ?

ಸರಕಾರದ ಮಾರ್ಗಸೂಚಿ ಅಥವಾ ನಿಯಮಗಳ ಪ್ರಕಾರದ ಜಮೀನಿನ ಮಾಲೀಕ ಮರಣ ಹೊಂದಿದ ಬಳಿಕ ಅವರ ಕುಟುಂಬದ ವಾರಸುದಾರರು 6 ತಿಂಗಳ ಒಳಗಾಗಿ ಆ ಜಮೀನಿನ ಖಾತೆಯನ್ನು ಬದಲಾವಣೆ ಮಾಡಿಕೊಳ್ಳಲೇಬೇಕು ಒಂದೊಮ್ಮೆ ಜಮೀನು ವರ್ಗಾವಣೆ ಕುರಿತು ವಿವಾದವಿದ್ದಲ್ಲಿ ಅಗ ನೀವು ತಪ್ಪದೇ ಪೌತಿ ಖಾತೆಯ ಮೂಲಕ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. 

ಹಂತ-1: 

ಮೊದಲ ಹಂತವಾಗಿ ಜಮೀನಿನ ಮಾಲೀಕ ಮರಣ ಹೊಂದಿದಾಗ ಅವನ ಮನೆಯವರು ಪೌತಿ ಖಾತೆ ಮಾಡಿಸಿಕೊಳ್ಳಲು ಕಂದಾಯ ಇಲಾಖೆಯಲ್ಲಿ(ಸೂಚನೆ: ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳ(VA) ಮುಖಾಂತರ ಅರ್ಜಿ ಸಲ್ಲಿಸಬೇಕು) "ಪೌತಿ ಖಾತೆ(Pothi khata)" ಎಂದರೆ ಮರಣ ಹೊಂದಿದ ಖಾತೆದಾರನ ಹೆಸರನ್ನು ಪಹಣಿಯಿಂದ ತೆಗೆದು ಆ ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಅಂದರೆ ನೇರ ವಾರಸುದಾರ ಹೆಸರಿಗೆ ಜಂಟಿಯಾಗಿ ಖಾತೆ ಬದಲಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯುತ್ತಾರೆ. (ಗಮನಿಸಿ: ತಾಯಿ, ಹೆಂಡತಿ, ಮಕ್ಕಳು ಮಾತ್ರ ನೇರ ವಾರಸುದಾರರಾಗಿರುತ್ತಾರೆ)

ವಿಶೇಷ ಸೂಚನೆ: ಪೌತಿ ಖಾತೆಯಾಗಿ ಬದಲಾವಣೆಯಾದ ಬಳಿಕ ಜಮೀನು ಸಂಪೂರ್ಣವಾಗಿ ಅವರ ಹೆಸರಿಗೆ ಆಗುವುದಿಲ್ಲ, ಕೇವಲ ಕಂದಾಯ ವಸೂಲಿಗಾಗಿ ಮತ್ತು ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಾತ್ರ ಅವಕಾಶವಿರುತ್ತದೆ.

ಇದನ್ನೂ ಓದಿ: Parihara amount-2024: ಕೇಂದ್ರದಿಂದ 3498 ಕೋಟಿ ಬರ ಪರಿಹಾರ ಬಿಡುಗಡೆ! ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ ಪರಿಹಾರದ ಹಣ!

ಹಂತ-2: 

ಪೌತಿ ಖಾತೆಯನ್ನು ಮಾಡಿಕೊಂಡ ಬಳಿಕ ಜಮೀನಿಗೆ 11ಇ ಗೆ ಕಂದಾಯ ಇಲಾಖೆಯಲ್ಲಿ ಅರ್ಜಿ ಹಾಕಬೇಕಾಗುತ್ತದೆ ಪೌತಿ ಖಾತೆ ಮಾಡಿದ ಬಳಿಕ ಅದರಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ ಮತ್ತು ಜಮೀನಿನ ಸಂಬಂಧಪಟ್ಟ ಎಲ್ಲಾ ಜಮೀನಿನ ಪಹಣಿಗಳು ಅರ್ಜಿ ಸಲ್ಲಿಸಲು ಬೇಕಾಗುತ್ತದೆ ಈ ಎಲ್ಲಾ ದಾಖಲೆಗಳ ಸಮೇತ ನಿಮ್ಮ ಹತ್ತಿರ ನಾಡಕಚೇರಿ ಭೇಟಿ ಮಾಡಿ ಜಮೀನಿಗೆ 11ಇ ಸ್ಕೆಚ್ ಗೆ ಅರ್ಜಿ ಸಲ್ಲಿಸಬೇಕು.

ಈ 11 ಇ ಸ್ಕೆಚ್ ಎಂದರೆ ಆ ಪಹಣಿಯಲ್ಲಿರುವ ಎಲ್ಲಾ ಸದಸ್ಯರಿಗೆ ಪ್ರತೇಕವಾಗಿ ಎಷ್ಟು ಎಷ್ಟು ಜಮೀನು ಎಂದು ಗುರುತಿಸಲಾಗುತ್ತದೆ. ಯಾರಿಗೆ ಎಷ್ಟು ಜಮೀನು ಎಂದು ಪಹಣಿಯಲ್ಲಿ ನಮೂದಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಪಹಣಿಯಲ್ಲಿ ಪೌತಿ ಬದಲು ವಿಭಾಗ ಎಂದು ಹಕ್ಕು ಬದಲಾವಣೆ ಅಗಿತ್ತದೆ.

ಹಂತ-3: 

ಜಮೀನಿಗೆ 11ಇ ಮಾಡಿಸಿದ ಬಳಿಕ ಮುಂದಿನ ಹಂತ ಎಂದರೆ ಅದು ವಿಭಾಗದ ಪತ್ರದ ಮೂಲಕ ತಮ್ಮ ತಮ ಹೆಸರಿಗೆ ಜಮೀನನ್ನು ಪಾಲು ಮಾಡಿಕೊಳ್ಳಲು ಅರ್ಜಿ ಸಲ್ಲಿಸಬೇಕು ಇದ್ದಕ್ಕಾಗಿ ಸರ್ವೆ ಇಲಾಖೆಯಿಂದ ತಯಾರಿಸಲಾದ 11 ಇ ಸ್ಕೆಚ್ ಮತ್ತು ಪಾಲುದಾರರ ಆಧಾರ್ ಕಾರ್ಡ ಪ್ರತಿ , ಕುಟುಂಬದ ವಂಶಾವಳಿ ಪ್ರಮಾಣ ಪತ್ರ ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಉಪನೋಂದಣಿ ಕಚೇರಿ(Sub registrar office)ಯನ್ನು ಭೇಟಿ ಮಾಡಿ ವಿಭಾಗ ಪತ್ರದ ಮೂಲಕ ಅಂದರೆ ಪಾರ್ಟಿಶನ್ ಡೀಡ್ ಮೂಲಕ ನೋಂದಣಿ ಮಾಡಿದ್ದರೆ ಇಲ್ಲಿದೆ ನಿಮ್ಮ ಜಮೀನಿನ ಪಾಲು ವಿಭಾಗ ನೋಂದಣಿ ಅಧಿಕೃತವಾಗಿ ಮುಗಿಯುತ್ತದೆ.

ಇದನ್ನೂ ಓದಿ: Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!

RTC copy- ನಿಮ್ಮ ನಿಮ್ಮ ಹೆಸರು ಪಹಣಿಯಲ್ಲಿ ಬರುವ ಪ್ರಕ್ರಿಯೆ ಮಾಹಿತಿ:

ನಿಮ್ಮ ಜಮೀನಿನ ರೆಜೀಸ್ಟರ ಕಾರ್ಯ ಮುಗಿದ ಬಳಿಕ 20 ದಿನಗಳ ಒಳಗಾಗಿ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ(VA-Village Accountant)ಅವರು ಮ್ಯುಟೇಶನ್‌ ಪ್ರಕ್ರಿಯೆ ಅಂದರೆ ಜೆ ಫಾರ್ಮ(J-form) ಪ್ರೋಸೆಸ್‌ ಇರುತ್ತದೆ ವಿಲೇಜ್ ಅಕೌಂಟಂಟ್‌ ಅಂದರೆ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅವರಿಗೆ ಮ್ಯುಟೇಶನ್‌ ಸಮಯದಲ್ಲಿ ಜೆ ಫಾರ್ಮನ ಮೇಲೆ ಸಹಿ ಮಾಡಿದ್ದರೆ ಸ್ವಲ್ಪ ದಿನಗಳ ನಂತರ ನಿಮ್ಮ ಹೆಸರಿಗೆ ಭಾಗವಾಗಿರುವ ಪಹಣಿಯಲ್ಲಿ ನಿಮ್ಮ ಹೆಸರು ಬರುತ್ತದೆ.

ಪತೇಕವಾಗಿ ಜಮೀನಿನ ನಕ್ಷೆ ಸಹ ಬರುತ್ತದೆ ಜೊತೆಗೆ ಪಹಣಿ ನಿಮ್ಮ ಹೆಸರಿನಲ್ಲಿ ಬಂದ ಬಳಿಕ ನೀವು ಆನ್ಲೈನ್ ನಲ್ಲಿ ನೇರವಾಗಿ bhoomi ವೆಬ್ಸೈಟ್ ಅಥವಾ ನಾಡಕಚೇರಿ ಭೇಟಿ ಮಾಡಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. 

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

ತಮ್ಮ ತಮ್ಮ ಹೆಸರಿಗೆ ಕೃಷಿ ಜಮೀನನ್ನು ವರ್ಗಾವಣೆ ಮಾಡಿಕೊಳ್ಳುವುದರಿಂದಾಗುವ ಪ್ರಯೋಜನಗಳು:

1) ಪಿ ಎಂ-ಕಿಸಾನ್ ಯೋಜನೆಯಡಿ ವಾರ್ಷಿಕ ರೂ 6,000 ಅರ್ಥಿಕ ನೆರವು ಪಡೆಯಬಹುದು(ಗಮನಿಸಿ: ಜಮೀನ ವರ್ಗಾವಣೆ ವಿಧ ಪೌತಿ/ವಿಭಾಗ/ವಿಭಜನೆ ಇದ್ದಲ್ಲಿ ಮಾತ್ರ)

2) ಕಡಿಮೆ ಬಡ್ದಿದರದಲ್ಲಿ ಬ್ಯಾಂಕ್ ಮೂಲಕ ಕೃಷಿ ಸಾಲ ಪಡೆಯಬಹುದು.

3) ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣ, ಕೃಷಿ ಹೊಂಡ, ನೆರಳು ಮನೆ, ತೋಟಗಾರಿಕೆ ಬೆಳೆ ಬೆಳೆಯಲು ಹನಿ ನೀರಾವರಿ ಘಟಕ, ರೇಷ್ಮೆ ಕೃಷಿ ಸಹಾಯಧನ, ಮೀನು ಸಾಕಾಣಿಕೆ, ಪಶುಸಂಗೋಪನೆ ಇಲಾಖೆ ಸಹಾಯಧನ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು, ಜೊತೆಗೆ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ನಿಮ್ಮ ಜಮೀನಿನಲ್ಲಿ ಮಾಡಿಕೊಳ್ಳಬಹುದು.