wild animal attacks relief- ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಹಾನಿಗೆ ಪರಿಹಾರದ ಧನ ಎಷ್ಟು? ಪಡೆಯುವ ವಿಧಾನ ಹೇಗೆ?

wild animal attacks relief: ಇತ್ತಿಚೀನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದು ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಲಭ್ಯತೆ ಕಡಿಮೆ ಆಗುತ್ತಿರುವುದು ಮತ್ತು ಅರಣ್ಯ ನಾಶ ಈ ಎಲ್ಲಾ ಕಾರಣಗಳಿಂದ ರೈತರ ತಾಕಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ಅಧಿಕ ಪ್ರಮಾಣದಲ್ಲಿ ಬೆಳೆ ಮತ್ತು ಮಾನವ ಹಾನಿಗಳು ಸಂಭವಿಸುತ್ತಿವೆ.

wild animal attacks relief- ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಹಾನಿಗೆ ಪರಿಹಾರದ ಧನ ಎಷ್ಟು? ಪಡೆಯುವ ವಿಧಾನ ಹೇಗೆ?
wild animal attacks relief- 2024

ಇತ್ತಿಚೀನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದು ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಲಭ್ಯತೆ ಕಡಿಮೆ ಆಗುತ್ತಿರುವುದು ಮತ್ತು ಅರಣ್ಯ ನಾಶ ಈ ಎಲ್ಲಾ ಕಾರಣಗಳಿಂದ ರೈತರ ತಾಕಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ಅಧಿಕ ಪ್ರಮಾಣದಲ್ಲಿ ಬೆಳೆ ಮತ್ತು ಮಾನವ ಹಾನಿಗಳು ಸಂಭವಿಸುತ್ತಿವೆ.

ಇಂತಹ ದಾಳಿಗಳಿಗೆ ಒಳಗಾಗುವ ಜನರಿಗೆ ಅರ್ಥಿಕವಾಗಿ ನೆರವನ್ನು(wild animal attacks relief) ನೀಡಲು ರಾಜ್ಯ ಸರಕಾರದಿಂದ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯ ಕುರಿತು ಅಂದರೆ ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಹಾನಿಗೆ ಪರಿಹಾರದ ಧನ ಎಷ್ಟು? ಪಡೆಯುವ ವಿಧಾನ ಹೇಗೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
 
ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ, ಶಾಶ್ವತ ಅಂಗವಿಕಲತೆ, ಭಾಗಶಃ ಅಂಗವಿಕಲತೆ ಮತ್ತು ಶಾಶ್ವತ ಅಂಗವಿಕಲತೆ, ಗಾಯಗೊಂಡವರಿಗೆ, ಅಸ್ತಿ-ಪಾಸ್ತಿ ನಷ್ಟ ಪ್ರಕರಣಗಳಿಗೆ ಸರಕಾರದಿಂದ ನೀಡುತ್ತಿದ ಪರಿಹಾರ ಮೊತ್ತ ಮತ್ತು ಮಾಶಾಸನ ಧನ ಕುರಿತು ಈ ಹಿಂದೆ ಅರಣ್ಯ ಇಲಾಖೆಯಿಂದ ನಿಗಧಿಪಡಿಸಿರುವ  ಪರಿಷ್ಕರಿಸಿದ ಪರಿಹಾರ ಮೊತ್ತದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Parihara grants- ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!
 
wild animal attacks relief- 2024: ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಹಾನಿಗೆ ಪರಿಹಾರದ ಧನ ಎಷ್ಟು?

ಕ್ರ ಸಂ

ಪ್ರಕರಣಗಳ ವಿವರ

ಹಿಂದಿನ ಪರಿಹಾರ ಧನ

ಪರಿಷ್ಕರಿಸಿದ ಪರಿಹಾರ ಧನ

01

ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ-ಪ್ರಾಣ ಹಾನಿ ಪ್ರಕರಣಗಳ

 

ರೂ 7.50 ಲಕ್ಷ

 

 

ರೂ 15.00 ಲಕ್ಷ

 

 

02

ಕಾಡುಪ್ರಾಣಿಯಿಂದ ಉಂಟಾಗುವ ಶಾಶ್ವತ ಅಂಗವಿಕಲತೆ ಪ್ರಕರಣಗಳು

 

ರೂ 5.00 ಲಕ್ಷ

 

 

ರೂ 10.00 ಲಕ್ಷ

 

 

03

ಕಾಡುಪ್ರಾಣಿಯಿಂದ ಉಂಟಾಗುವ ಭಾಗಶಃ ಶಾಶ್ವತ ಅಂಗವಿಕಲತೆ ಪ್ರಕರಣಗಳು

 

 

ರೂ 2.50 ಲಕ್ಷ

 

 

ರೂ 5.00 ಲಕ್ಷ

 

 

04

ಕಾಡುಪ್ರಾಣಿಗಳಿಂದ ಗಾಯಗೊಂಡ ಪ್ರತಿ ವ್ಯಕ್ತಿಗೆ ಗರಿಷ್ಠ ಮೊತ್ತ ಪ್ರಕರಣಗಳು

 

ರೂ 30,000/-

 

 

ರೂ 60,000/-

 

 

05

ಕಾಡಾನೆ ದಾಳಿಯಿಂದ ಉಂಟಾದ ಆಸ್ತಿ ನಷ್ಟ ಪ್ರತಿ ಪ್ರಕರಣಕ್ಕೆ

 

ರೂ 10,000/-

 

 

ರೂ 20,000/-

 

 

06

ಮಾಸಾಶನ: ವನ್ಯಪ್ರಾಣಿಗಳ ದಾಳಿ ಅಥವಾ ಹಾವಳಿಯಿಂದ ಉಂಟಾಗುವ ಮಾನವ-ಪ್ರಾಣ ಹಾನಿ ಪ್ರಕರಣಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಹಾಗೂ ಶಾಶ್ವತ ಅಂಗವಿಕಲತೆಗೊಳಗಾದ ವ್ಯಕ್ತಿಗಳಿಗೆ ನೀಡುತ್ತಿರುವ ಧಯಾತ್ಮಕ ಧನ ಅಥವಾ ಪರಿಹಾರ ಧನದ ಜೊತೆಗೆ ಪ್ರತಿ ತಿಂಗಳಂತೆ 5 ವರ್ಷಗಳವರೆಗೆ ಮಾಸಾಶನ.

 

ರೂ 2,000/-

 

ರೂ 4,000/-

 

ಇದನ್ನೂ ಓದಿ: Fastag kyc- ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಲು ಫೆ,29 ಕೊನೆಯ ದಿನ! ಕೆವೈಸಿ ನಿಮ್ಮ ಮೊಬೈಲ್ ನಲ್ಲೇ ಮಾಡಬಹುದು!ಪರಿಹಾರ

ಪಡೆಯುವ ವಿಧಾನ ಹೇಗೆ?

ಕಾಡು ಪ್ರಾಣಿಗಳ ದಾಳಿಯಿಂದ ನಿಮ್ಮ ಅಕ್ಕ-ಪಕ್ಕದವರಿಗೆ ಯಾರಿಗಾದರು ತೊಂದರೆ ಉಂಟಾದ ನಿಮ್ಮ ಹತ್ತಿರದ ಪೋಲಿಸ್ ಠಾಣೆ ಮತ್ತು ಆರಣ್ಯ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ದೂರು ದಾಖಲಿಸಬೇಕು. ಬಳಿಕ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮಾಡಿಕೊಂಡು ಅರ್ಜಿ ವಿಲೇವಾರಿ ಪ್ರಕ್ರಿಯೆ ಮುಗಿಸಿ ಅರ್ಹ ಅರ್ಜಿದಾರ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯ(DBT) ಮೂಲಕ ಪರಿಹಾರದ ಹಣ ಫಲಾನುಭವಿ ಖಾತೆಗೆ ಜಮಾ ಅಗುತ್ತದೆ.