Crop insurance and loss: ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

August 22, 2023 | Siddesh

ರಾಜ್ಯದಲ್ಲಿ ಬಹುತೇಕ ಭಾಗದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಅನೇಕ ಜನ ರೈತರು ಬೆಳೆಗಳನ್ನು ಅಳಿಸುವುದು ಮತ್ತು ದನ-ಕರುಗಳನ್ನು ಕೂಡುವುದನ್ನು ಮಾಡುತ್ತಿದಾರೆ ಈ ರೀತಿ ಮಾಡುವ ಮುನ್ನ ರೈತರು ಈ ಅಂಕಣದಲ್ಲಿ ವಿವರಿಸಿದ ಕ್ರಮಗಳನ್ನು ಅನುಸರಿಸಿ ತಾವು ಬೆಳೆ ಬಿತ್ತನೆ ಮಾಡಲು ವ್ಯಯಿಸಿದ ಖರ್ಚನ್ನು ಪರಿಹಾರ ರೂಪದಲ್ಲಿ ಪಡೆಯಬವುದು.

ಅನೇಕ ಜನ ರೈತರಿಗೆ ಈ ಮಾಹಿತಿ ಗೊತೇ ಅಗುವುದಿಲ್ಲ  ಅದ್ದರಿಂದ ಈ ವಿಷಯವನ್ನು ನಿಮಗೆ ಗೋತ್ತಿರುವ ಎಲ್ಲಾ ರೈತ ಭಾಂದವರಿಗೆ ತಪ್ಪದೇ ತಿಳಿಸಿ. ಅತಿವೃಷ್ಟಿ ಮತ್ತು ಅನಾವೃಷ್ಠಿಯಿಂದ, ಅಥವಾ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾನಿ ಅದರೆ ರೈತರು ನೇರವಾಗಿ ಬೆಳೆ ಅಳಿಸದೆ/ನಾಶ ಮಾಡದೇ ಒಮ್ಮೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ಬೆಳೆ ಹಾನಿ(Crop insurance and loss) ಅಗಿರುವುದರ ಕುರಿತು ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಸ್ಥಳ ಭೇಟಿ ಮಾಡಲು ತಿಳಿಸಿ.

ಒಂದೊಮ್ಮೆ ನೀವು ಬೆಳೆದಿರುವಂತಹ ಬೆಳೆಗೆ ಬೆಳೆ ವಿಮಾ ಮಾಡಿದಿದ್ದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಗೆ ಸಂಬಂದಿಸಿದ ವಿಮಾ ಕಂಪನಿಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ವಿಮಾ ಪ್ರತಿನಿಧಿಯ ಮೊಬೈಲ್ ಸಂಖ್ಯೆಯನ್ನು ಪಡೆದು ನಂತರ ಅವರಿಗೆ ಕರೆ ಮಾಡಿ ನಿಮ್ಮ ಬೆಳೆ ಹಾನಿಯಾಗಿರುವುದರ ಕುರಿತು ತಿಳಿಸಿ ಕ್ಷೇತ್ರ ಭೇಟಿ ಮಾಡಲು ತಿಳಿಸಿ.

ಹೀಗೆ ರೈತರು ತಪ್ಪದೇ ಬೆಳೆ ಪರಿಹಾರ ಮತ್ತು ಬೆಳೆ ವಿಮಾ ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು ಇದರಿಂದ ನಿಮಗೆ ಅರ್ಥಿಕ ನಷ್ಟದಿಂದ ಹೊರ ಬರಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: Gruhalakshmi Amount: ಗೃಹಲಕ್ಷ್ಮೀ ಯೋಜನೆಯಡಿ ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ? ಅಂತಿಮ ಪಟ್ಟಿ ಬಿಡುಗಡೆ!

ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಇಲ್ಲಿ ರೈತರು ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ ಬೆಳೆ ಪರಿಹಾರ ಮತ್ತು ಬೆಳೆ ವಿಮಾ 2 ಬೇರೆ ಬೇರೆ ಅಗಿರುತ್ತವೆ. ಬೆಳೆ ಪರಿಹಾರವನ್ನು ಬೆಳೆ ಬೆಳೆದ ಎಲ್ಲಾ ರೈತರು ಬೆಳೆ ಹಾನಿಯಾಗಿದ್ದರೆ ಸಂಬಂದಪಟ್ಟ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬವುದು.

ಬೆಳೆ ವಿಮಾ ವೈಯಕ್ತಿಕವಾಗಿ ಪರಿಹಾರ ಪಡೆಯಲು ರೈತರು ಬಿತ್ತನೆ ಮಾಡಿದ ನಂತರ ಅಥವಾ ಮುಂಚಿತವಾಗಿ ವಿಮೆಗೆ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ವಿಮಾ ಪಡೆಯಲು ಅರ್ಜಿ ಸಲ್ಲಿಸಬವುದು. ಹೀಗೆ ನೀವು ಅರ್ಜಿ ಸಲ್ಲಿಸಿದರೆ ಸಂರಕ್ಷಣೆ ವೆಬ್ಸೈಟ್ ನಲ್ಲಿ ಅಥವಾ ನಿಮ್ಮ ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ನಿಮ್ಮ ಭಾಗದ ವಿಮಾ ಕಂಪನಿಯ ಪ್ರತ್ತಿನಿಧಿ ನಂಬರ್ ಪಡೆದು ಬೆಳೆ ಹಾನಿಯಾದ ಜಮೀನನ್ನು ಇಲಾಖೆ ಅಧಿಕಾರಿ ಸಮ್ಮೂಖದಲ್ಲಿ ಭೇಟಿ ಮಾಡಿಸಿ ಬೆಳೆ ವಿಮಾಗೆ ಮನವಿ ಸಲ್ಲಿಸಬವುದು.

ನೀವು ಸಲ್ಲಿಸಿದ ಅರ್ಜಿ ಮತ್ತು ಅತಿವೃಷ್ಟಿ ಮತ್ತು ಅನಾವೃಷ್ಠಿಯಿಂದ ಹಾನಿಯಾದ ಜಮೀನಿನ ಸ್ಥಳವನ್ನು ಭೇಟಿ ಮಾಡಿ ಪರಿಶೀಲನೆ ಮಾಡಿ ಬೆಳೆ ವಿಮಾ ಮತ್ತು ಪರಿಹಾರಕ್ಕೆ ಶಿಪಾರಸ್ಸು ಮಾಡಲಾಗುತ್ತದೆ.

ನಿಮ್ಮ ಜಿಲ್ಲೆಯ ವಿಮಾ ಕಂಪನಿ(Crop insurance company) ಯಾವುದು ಮತ್ತು ಅದರ ಸಹಾಯವಾಣಿ ತಿಳಿಯುವ ವಿಧಾನ:

ಈ ಲಿಂಕ್ https://samrakshanereports.karnataka.gov.in/HomePages/frmKnowYourInsCompany.aspx ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆಗೆ ಸಂಬಂದಪಟ್ಟ ವಿಮಾ ಕಂಪನಿಯ ಹೆಸರನ್ನು ಪಡೆಯಬವುದು.

ರಾಜ್ಯ ಸರಕಾರದ ಸಂರಕ್ಷಣೆ ಪೂರ್ಟಲ್ ನಲ್ಲಿ ಈ 080 2656 4535 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ವಿಮಾ ಕಂಪನಿ ಪ್ರತಿ ನಿಧಿಯ ಮೊಬೈಲ್ ಸಂಖ್ಯೆಯನ್ನು ಪಡೆಯಬವುದು.

Bele parihara- ಬೆಳೆ ಪರಿಹಾರ ಅರ್ಜಿ ಕುರಿತು ತಿಳಿಯುವುದು ಹೇಗೆ?

ಒಮ್ಮೆ ನೀವು ಸಲ್ಲಿಸಿದ ಬೆಳೆ ಪರಿಹಾರದ ಅರ್ಜಿಯ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಈ https://landrecords.karnataka.gov.in/PariharaPayment/ ವೆಬ್ಸೈಟ್ ಭೇಟಿ ಮಾಡಿ ಅರ್ಜಿ ಸ್ಥಿತಿ ಕುರಿತು ಸಂಪೂರ್ಣ ವಿವರವನ್ನು ಪಡೆಯಬವುದಾಗಿದೆ.

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಇದನ್ನೂ ಓದಿ: Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!

WhatsApp Group Join Now
Telegram Group Join Now
Share Now: