BPL Card-ಅನರ್ಹ ಬಿಪಿಎಲ್ ಕಾರ್ಡದಾರರಿಗೆ ನೋಟಿಸ್! ನಿಮಗೆ ನೋಟಿಸ್ ಬಂದರೆ ಏನು ಮಾಡಬೇಕು

September 13, 2025 | Siddesh
BPL Card-ಅನರ್ಹ ಬಿಪಿಎಲ್ ಕಾರ್ಡದಾರರಿಗೆ ನೋಟಿಸ್! ನಿಮಗೆ ನೋಟಿಸ್ ಬಂದರೆ ಏನು ಮಾಡಬೇಕು
Share Now:

ಆಹಾರ ಇಲಾಖೆಯಿಂದ ಅನರ್ಹ ಬಿಪಿಎಲ್ ಕಾರ್ಡದಾರರನ್ನು(BPL Card) ಪತ್ತೆ ಹಚ್ಚುವ ಕಾರ್ಯ ತೀರ್ವಗೊಳಿಸಲಾಗಿದ್ದು ಅನರ್ಹ ಬಿಪಿಎಲ್ ಕಾರ್ಡಗಳನ್ನು ಹೊಂದಿರುವ ಫಲಾನುಭವಿಗಳಿಗೆ ನೋಟಿಸ್ ಅನ್ನು ಕಳುಹಿಸಲಾಗುತ್ತಿದ್ದು ಈ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡಗಳು(BPL ration card eligible list) ಇದ್ದು ಆಹಾರ ಇಲಾಖೆಯು ಈ ಕುರಿತು ಪರಿಶೀಲನೆಯನ್ನು ಕೈಗೊಂಡು ಪ್ರಸ್ತುತ ಮಾರ್ಗಸೂಚಿಯ ಪ್ರಕಾರ ಬಿಪಿಎಲ್ ಕಾರ್ಡ ಪಡೆಯಲು ಅರ್ಹರಿಲ್ಲದ ನಾಗರಿಕರಿ ನೋಟಿಸ್ ಅನ್ನು ಜಾರಿ ಮಾಡಿ ಮರು ಪ್ರತಿಕ್ರಿಯೆ ಬರದಿರುವ ನಾಗರಿಕರ ಕಾರ್ಡಗಳನ್ನು ರದ್ದು ಮಾಡಲಾಗುತ್ತಿದೆ.

ಇದನ್ನೂ ಓದಿ: JK Tyre Shiksha Scholarship-ಜೆಕೆ ಟೈರ್ ಸ್ಕಾಲರ್ಶಿಪ್ ವಿದ್ಯಾರ್ಥಿನಿಯರಿಗೆ ರೂ 25,000/- ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಈ ಲೇಖನದಲ್ಲಿ ನಿಮ್ಮ ಮನೆಗೂ ನೋಟಿಸ್(Karnataka Ahara Ilake)ಬಂದರೆ ನೀವು ಏನು ಮಾಡಬೇಕು? ಮಾರ್ಗಸೂಚಿ ಪ್ರಕಾರ ಅರ್ಹರಿದ್ದರು ನಿಮ್ಮ ಕಾರ್ಡ ಅನರ್ಹರ ಪಟ್ಟಿಯಲ್ಲಿ ಸೇರಿದ್ದರೆ ನಾಗರಿಕರು ಯಾವ ಕ್ರಮವನ್ನು ಅನುಸರಿಸಬೇಕು ಇದರ ಬಗ್ಗೆ ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

BPL Card Cancellation Notice-ಆಹಾರ ಇಲಾಖೆಯ ನೋಟಿಸ್ ನಲ್ಲಿದೆ ಏನಿದೆ?

ಗ್ರಾಮದ ವಾಸಿಯಾದ ನೀವು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಪಡಿತರ ಚೀಟಿ ಸಂಖ್ಯೆ "_" ನಿಮ್ಮ ಪಡಿತರ ಚೀಟಿಯಲ್ಲಿನ ಸದಸ್ಯರಾದ "__" ಸದರಿಯವರಿಗೆ ಸಂಬಂಧಿಸಿದಂತೆ ಉಲ್ಲೇಖ(3)ರ ವರದಿಯಲ್ಲಿ CBDI Incone Group Annual Income 1,20,000 (CBDT-Central Board of Direct Taxation) 2 ಉಲ್ಲೇಖ(1)ರಂತೆ ನೀವು ಎಎವೈ/ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಾಗಿರುವುದಿಲ್ಲ. ಈ ಬಗ್ಗೆ, ಪರಿಶೀಲಿಸಿ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ/ಎಪಿಎಲ್ ಪಡಿತರ ಚೀಟಿಯನ್ನಾಗಿ ಪರಿವರ್ತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಲ್ಲೇಖ(2)ರಂತೆ ಸೂಚಿಸಲಾಗಿರುತ್ತದೆ ಎಂದು ವಿವರಣೆ ನೀಡಲಾಗಿದೆ.

ಅಲ್ಲದೇ, ಒಂದು ವೇಳೆ ನೋಟಿಸ್ ಬಂದಿದ್ದರೆ ಅಂತವರು, ಆಕ್ಷೇಪಣೆಗಳು/ ವಿವರಣೆಗಳು/ ನಿಮ್ಮ ವಾದ ಇದ್ದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪ್ರತಿಗಳೊಂದಿಗೆ ಈ ಪತ್ರ ತಲುಪಿದ ದಿನಗಳೊಳಗೆ ಈ ಕಛೇರಿಗೆ ಸಲ್ಲಿಸುವುದು. ತಪ್ಪಿದಲ್ಲಿ ನಿಮ್ಮವಾದ ಏನು ಇಲ್ಲವೆಂದು ಭಾವಿಸಿ The Karnatak (Prevention of Unauthorized Possession of Ration Cards) Order 1977 ಕ್ರಮ ವಹಿಸಲಾಗುವುದು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: BPL Card Cancellation- 3.65 ಲಕ್ಷ ಅನರ್ಹ BPL ಕಾರ್ಡ ರದ್ದು: ಸಿಎಂ ಸಿದ್ದರಾಮಯ್ಯ

BPL Card

ಇದನ್ನೂ ಓದಿ: Traffic Fine 50% Offer-ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಬಾಕಿ ದಂಡ ಪಾವತಿಗೆ ಶೇ 50% ರಿಯಾಯಿತಿ!

BPL Card Cancellation Objection Letter-ಆಕ್ಷೇಪಣೆ ಸಲ್ಲಿಸಲು ಅವಕಾಶ:

ಆಹಾರ ಇಲಾಖೆಯಿಂದ ಅನರ್ಹ ಪಟ್ಟಿಯಲ್ಲಿರುವ ಎಲ್ಲಾ ಬಿಪಿಎಲ್ ಕಾರ್ಡದಾರರಿಗೆ ನೋಟಿಸ್ ಅನ್ನು ಕಳುಹಿಸಲಾಗಿದ್ದು ನಿಮಗೂ ಈ ನೋಟಿಸ್ ಬಂದರೆ ಅಥವಾ ಮಾರ್ಗಸೂಚಿ ಪ್ರಕಾರ ಅರ್ಹರಿದ್ದರು ನೋಟಿಸ್ ಬಂದರೆ ಕೂಡಲೇ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪ್ರತಿಗಳೊಂದಿಗೆ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಕಾರ್ಡ ರದ್ದು ಪಡಿಸದಂರೆ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

BPL Ration Card- 3.6 ಲಕ್ಷ ಬಿಪಿಎಲ್ ಕಾರ್ಡ ರದ್ದು:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಆಹಾರ ಇಲಾಖೆಯಿಂದ ಈಗಾಗಲೇ 3.6 ಲಕ್ಷ ಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡದಾರರನ್ನು ಗುರುತಿಸಿ ಎಪಿಎಲ್ ಕಾರ್ಡಗಳನ್ನಾಗಿ ಪರಿವರ್ತಿಸಲಾಗಿದೆ.

ಇದನ್ನೂ ಓದಿ: IDFC First Bank Scholarship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ IDFC First ಬ್ಯಾಂಕ್ ನಿಂದ 1.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

CM Of Karnataka-ಪಡಿತರ ವಿತರಣೆಯಲ್ಲಿ ಅಕ್ರಮ ತಡೆಗೆ ನೂತನ ಕ್ರಮಕ್ಕೆ ಸಿಎಂ ಸೂಚನೆ:

ಪಡಿತರ ಚೀಟಿದಾರರಿಗೆ ವಿತರಣೆ ಮಾಡುವ ಅಕ್ಕಿ ಸೇರಿದಂತೆ ಇತರೆ ಆಹಾರ ಧಾನ್ಯಗಳ ಕಳ್ಳ ಸಾಗಣಿಕೆಗೆ ಬ್ರೇಕ್ ಹಾಕಲು ಇಲಾಕೆಯ ಅಧಿಕಾರಿಗಳಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸೇರಿದಂತೆ ಇತರೆ ಆಹಾರ ಧಾನ್ಯಗಳನ್ನು ಗೋದಾಮುಗಳಿಂದ ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್ ಗಳನ್ನು ಅಳವಡಿಸಿವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಹೊರಡಿಸಲಾಗಿದೆ. ಜೊತೆಗೆ ಆಹಾರ ಧಾನ್ಯಗಳನ್ನು ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Ration Card Ineligible-ಯಾವುದೇ ಕಾರಣಕ್ಕೂ ಅರ್ಹ ಕಾರ್ಡ ರದ್ದುಪಡಿಸದಂತೆ: ಸಿಎಂ ಸೂಚನೆ

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಅರ್ಹರಿಗೆ ಯಾವುದೇ ಕಾರಣಕ್ಕೂ ಕಾರ್ಡ್ ಮಿಸ್ ಆಗಬಾರದು, ಯಾರು ಅನರ್ಹ ಇದ್ದರೆ ಅವರಿಗೆ ಮಾತ್ರ ತೆಗೆಯುವ ಕೆಲಸ ಆಗ್ತಿದೆ. ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಮಾಡಿದ್ದು, ಅದರ ಅನ್ವಯ ಕ್ರಮ ಆಗ್ತಿದೆ. ಒಂದು ವೇಳೆ ಅರ್ಹರಿದ್ದರೆ ಅವರು ಹೊಸದಾಗಿ ಅರ್ಜಿ ಹಾಕಿದರೆ ಅವರಿಗೆ ಕಾರ್ಡ್ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದಲ್ಲದೇ ಆಹಾರ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಅರ್ಹರಿಂಗೆ ಈ ಯೋಜನೆಯ ಸೌಲಭ್ಯ ತಪ್ಪಿಸದಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ತಿಳಿಸಿದರು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: