ration card- ಇಂದು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!
ಆಹಾರ ಇಲಾಖೆಯಿಂದ ಇಂದು(06-02-2024) ಮತ್ತು ನಾಳೆ(07-01-2024) ರಂದು ಎರಡು ದಿನ ವೈದ್ಯಕೀಯ ಎಮರ್ಜೆನ್ಸಿ ಕಾರಣದಿಂದಾಗಿ ಪಡಿತರ ಚೀಟಿ(ration card) ತಿದ್ದುಪಡಿ ಮಾಡಿಕೊಳ್ಳಲು ಅವಶ್ಯಕತೆ ಇದ್ದವರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
![ration card- ಇಂದು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!](https://www.krushikamitra.com/uploads/images/202402/image_870x_65c197c780527.jpg)
ಆಹಾರ ಇಲಾಖೆಯಿಂದ ಇಂದು(06-02-2024) ಮತ್ತು ನಾಳೆ(07-01-2024) ರಂದು ಎರಡು ದಿನ ವೈದ್ಯಕೀಯ ಎಮರ್ಜೆನ್ಸಿ ಕಾರಣದಿಂದಾಗಿ ಪಡಿತರ ಚೀಟಿ(ration card) ತಿದ್ದುಪಡಿ ಮಾಡಿಕೊಳ್ಳಲು ಅವಶ್ಯಕತೆ ಇದ್ದವರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇಂದು ಅಂದರೆ 06-02-2024 ರಂದು ಮಧ್ಯಾಹ್ನ 1-00 ಗಂಟೆಯಿಂದ 4-00 ಗಂಟೆಯವರೆಗೆ ಕಲಬುರ್ಗಿ/ಬೆಂಗಳೂರು ವಿಭಾಗ(ಬೆಂಗಳೂರು ಜಿಲ್ಲೆ ಹೊರತುಪಡಿಸಿ) ವ್ಯಾಪ್ತಿಯ ಜಿಲ್ಲೆಯ ಗ್ರಾಹಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ನಾಳೆ ಅಂದರೆ 07-02-2024 ರಂದು ಮಧ್ಯಾಹ್ನ 1-00 ಗಂಟೆಯಿಂದ 4-00 ಗಂಟೆಯವರೆಗೆ ಬೆಳಗಾವಿ/ಮೈಸೂರು ವಿಭಾಗದ ಜಿಲ್ಲೆಯ ಸಾರ್ವಜನಿಕರಿಗೆ ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Parihara grants- ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!
ಇಂದು 06-02-2024 ರಂದು ಮಧ್ಯಾಹ್ನ 1-00 ಗಂಟೆಯಿಂದ 4-00 ಗಂಟೆಯವರೆಗೆ ಕಲಬುರ್ಗಿ/ಬೆಂಗಳೂರು ವಿಭಾಗದ ಈ ಕೆಳಗೆ ತಿಳಿಸಿದ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ(ONLY FOR KALABURAGI/BENGALURU DIVISIONS EXCEPT BENGALURU(URBAN/RURAL/CITY)):
- ಬಳ್ಳಾರಿ
- ಬೀದರ್
- ಚಿಕ್ಕಬಳ್ಳಾಪುರ
- ಚಿತ್ರ ದುರ್ಗ
- ದಾವಣಗೆರೆ
- ಕಲಬುರ್ಗಿ
- ಕೋಲಾರ
- ಕೊಪ್ಪಳ
- ರಾಯಚೂರು
- ರಾಮನಗರ
- ಶಿವಮೊಗ್ಗ
- ತುಮಕೂರು
- ಯಾದಗಿರಿ
- ವಿಜಯನಗರ
ಇದನ್ನೂ ಓದಿ: Fastag kyc- ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಲು ಫೆ,29 ಕೊನೆಯ ದಿನ! ಕೆವೈಸಿ ನಿಮ್ಮ ಮೊಬೈಲ್ ನಲ್ಲೇ ಮಾಡಬಹುದು!ಪರಿಹಾರ
ನಾಳೆ 07-02-2024 ರಂದು ಮಧ್ಯಾಹ್ನ 1-00 ಗಂಟೆಯಿಂದ 4-00 ಗಂಟೆಯವರೆಗೆ ಬೆಳಗಾವಿ/ಮೈಸೂರು ವಿಭಾಗದ ಈ ಕೆಳಗೆ ತಿಳಿಸಿದ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ(ONLY FOR BELAGAVI/MYSURU DIVISIONS):
- ಬಾಗಲಕೋಟೆ
- ಬೆಳಗಾವಿ
- ಚಾಮರಾಜನಗರ
- ಚಿಕ್ಕಮಂಗಳೂರು
- ದಕ್ಷಿಣಕನ್ನಡ
- ಧಾರವಾಡ
- ಗದಗ
- ಹಾಸನ
- ಹಾವೇರಿ
- ಕೊಡಗು
- ಮಂಡ್ಯ
- ಮೈಸೂರು
- ಉಡುಪಿ
- ಉತ್ತರಕನ್ನಡ
- ವಿಜಯಪುರ
ಇದನ್ನೂ ಓದಿ: Marriage registration- ವಿವಾಹ ನೋಂದಣಿ ಇನ್ನು ಭಾರೀ ಸುಲಭ!
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಜಿದಾರ ಗ್ರಾಹಕರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಬೇರೆ ಯಾವ ಕಡೆಯಲ್ಲಿಯು/ಕೇಂದ್ರಗಳಲ್ಲಿಯು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು? ಅಗತ್ಯ ದಾಖಲಾತಿಗಳೇನು ಎನ್ನುವ ಸಂಪೂರ್ಣ ಮಾಹಿತಿಗಾಗಿ ನಮ್ಮ ಪುಟದ ಈ ಅಂಕಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: click here
ಸರ್ವರ್ ಸಮಸ್ಯೆಗೆ ಬೇಕು ಶಾಶ್ವತ ಪರಿಹಾರ:
ಸಾರ್ವಜನಿಕರಿಗೆ ಆಹಾರ ಇಲಾಖೆಯಿಂದ ಈ ರೀತಿ ಪಡಿತರ ಚೀಟಿ ತಿದ್ದುಪಡಿಗೆ ಕೇವಲ ಒಂದು ದಿನ ಮತ್ತು ನಿಗದಿತ ಸಮಯದಲ್ಲಿ ಮಾತ್ರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಬರುತ್ತಿದ್ದು ಕೇವಲ ಬೆರಳೆಣಿಕೆಯಷ್ಟು ಅರ್ಜಿಗಳನ್ನು ಸಲ್ಲಿಸಲು ಮಾತ್ರ ಸಾಧ್ಯವಾಗುತ್ತಿದೆ ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯತೆ ಇದೆ.
ಪ್ರಮುಖ ಉಪಯುಕ್ತ ಲಿಂಕ್ ಗಳು:
ಆಹಾರ ಮತ್ತು ನಾಗರಿಕ ವ್ಯವಹಾರ ಇಲಾಖೆಯ ಅಧಿಕೃತ ವೆಬ್ಸೈಟ್: click here