South India Tour-ದಕ್ಷಿಣ ಭಾರತ ಯಾತ್ರೆ ಕೈಗೊಳ್ಳಲು ಸರ್ಕಾರದಿಂದ ₹5,000 ಸಹಾಯಧನ!

June 7, 2025 | Siddesh
South India Tour-ದಕ್ಷಿಣ ಭಾರತ ಯಾತ್ರೆ ಕೈಗೊಳ್ಳಲು ಸರ್ಕಾರದಿಂದ ₹5,000 ಸಹಾಯಧನ!
Share Now:

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಧಾರ್ಮಿಕ ದತ್ತಿ ಇಲಾಖೆಯಿಂದ ಭಾರತ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಕೈಗೊಳ್ಳಲು "ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ/KARNATAKA BHARAT GAURAV DAKSHINA YATRA" ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಮುಂದಾಗಿದ್ದು ಇದಕ್ಕಾಗಿ ಅರ್ಹ ಪ್ರವಾಸಿಗಳಿಗೆ ಟಿಕೆಟ್ ಬುಕಿಂಗ್ ಮಾಡಲು ಸಹಾಯಧನವನ್ನು ಪಡೆಯಲು ಅವಕಾಶ ನೀಡಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ ಗೌರವ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ರಾಮೇಶ್ವರ(Rameswaram), ಕನ್ಯಾಕುಮಾರಿ(Kanniyakumari), ಮಧುರೈ(Madurai), ತಿರುವನಂತಪುರಂ(Thiruvananthapuram) ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಪ್ರವಾಸ ಇದಾಗಿದ್ದು ಈ ಸ್ಥಳಗಳ ಭೇಟಿಗೆ ಪ್ರವಾಸವನ್ನು ರೈಲ್ವೆ ಮೂಲಕ ತೆರಲು ಆಸಕ್ತಿಯನ್ನು ಹೊಂದಿರುವ ಪ್ರವಾಸಿಗಳಿಗೆ ಸಬ್ಸಿಡಿಯಲ್ಲಿ ಟಿಕೆಟ್ ಬುಕ್ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: Education Loan-ಅರಿವು ಯೋಜನೆಯಡಿ ಕೇವಲ ಶೇ 2% ಬಡ್ಡಿದರದಲ್ಲಿ ₹5.0 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ!

ಕರ್ನಾಟಕ ಭಾರತ ಗೌರವ ದಕ್ಷಿಣ ಕ್ಷೇತ್ರಗಳ ಯಾತ್ರೆಗೆ ಸಹಾಯಧನ(South India Tour Subsidy)ಪಡೆಯುವುದು ಹೇಗೆ?ಪ್ರವಾಸ ತೆರಳಲು ಅರ್ಹರು,ಎಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ?ಟಿಕೆಟ್ ಬುಕ್ ಮಾಡುವ ವಿಧಾನ ಹೇಗೆ?ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

South India Tour Subsidy Amount-ಎಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ?

ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರಸ್ತುತ ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ ಈ ಪ್ಯಾಕೇಜ್‌ಗೆ ಒಟ್ಟು ₹15,000 ತಗುಲಲಿದ್ದು, ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ ₹5,000 ಭರಿಸಲಾಗುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್‌ ಮೊತ್ತವಾಗಿ ₹10,000 ಮಾತ್ರ ಪಾವತಿಸಬೇಕಾಗುತ್ತದೆ.

3 ಟೈರ್‌ ಎ.ಸಿ. ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ. ಪ್ರತಿ ಕೋಚ್‌ಗೆ ಪ್ರವಾಸ ಮಾರ್ಗದರ್ಶಕರು, ರೈಲಿನಲ್ಲಿ ಭದ್ರತಾ ವ್ಯವಸ್ಥೆ ಇರುತ್ತದೆ.

ಇದನ್ನೂ ಓದಿ: PM Kisan 20th installment-ಪಿಎಂ ಕಿಸಾನ್ 20ನೇ ಕಂತು ಈ ಅವಧಿಯಲ್ಲಿ ಬಿಡುಗಡೆ ಸಾಧ್ಯತೆ!

South India Tour Place-ಭೇಟಿ ನೀಡುವ ಸ್ಥಳಗಳ ವಿವರ:

  • ರಾಮೇಶ್ವರ/Rameswaram: Ramanathaswamy temple.
  • ಕನ್ಯಾಕುಮಾರಿ/Kanniyakumari: Bhagavathy Temple, Vivekananda Rock Memorial.
  • ಮಧುರೈ/Madurai: Meenakshi temple.
  • ತಿರುವನಂತಪುರಂ/Thiruvananthapuram: Sree Padmanabhaswamy Temple.

Who Can Apply For This Tour-ಪ್ರವಾಸ ತೆರಳಲು ಅರ್ಹರು:

ಪ್ರವಾಸಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಈಗಾಗಲೇ ಸಬ್ಸಿಡಿಯನ್ನು ಪಡೆದು ಪ್ರವಾಸಕ್ಕೆ ತೆರಳಿರುವವರು ಮತ್ತೊಮ್ಮೆ ಪ್ರವಾಸಕ್ಕೆ ತೆರಳಲು ಅವಕಾಶವಿರುವುದಿಲ್ಲ.

South India Tour

ಇದನ್ನೂ ಓದಿ: Navodaya school admission-ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ!

South India Tour Duration-ಪ್ರವಾಸದ ದಿನಗಳು:

ಈ ಪ್ರವಾಸವು ದಿನಾಂಕ 25 ಜೂನ್ 2025 ರಿಂದ ಆರಂಭವಾಗಿ ದಿನಾಂಕ 30 ಜೂನ್ 2025ಕ್ಕೆ ಮುಕ್ತಾಯವಾಗಲಿದ್ದು ಒಟ್ಟು 6 ದಿನಗಳ ಪ್ರವಾಸ ಇದಾಗಿರುತ್ತದೆ.

South India Tour Boarding Station-ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು:

ಈ ಪ್ರವಾಸಕ್ಕೆ ತೆರಳಲು ಆಸಕ್ತಿಯನ್ನು ಹೊಂದಿರುವ ಪ್ರವಾಸಿಗಳು ಈ ಕೆಳಗಿನ ರೈಲ್ವೆ ನಿಲ್ದಾಣಗಳಿಂದ ಪ್ರವಾಸಕ್ಕೆ ತೆರಳಲು ಅವಕಾಶವಿರುತ್ತದೆ.

1) ಎಸ್.ಎಂ.ವಿ.ಟಿ ಬೆಂಗಳೂರು/Bengaluru
2) ಬೆಳಗಾವಿ/Belagavi
3) ಹುಬ್ಬಳ್ಳಿ/Hubbali
4) ಹಾವೇರಿ/Haveri
5) ದಾವಣಗೆರೆ/Davanagere
6) ತುಮಕೂರು/Tumkur
7) ಬೀರೂರು/Berur

ಇದನ್ನೂ ಓದಿ: Car Subsidy-ಸ್ವಾವಲಂಬಿ ಸಾರಥಿ ಯೋಜನೆ ಟ್ಯಾಕ್ಸಿ,ಗೂಡ್ಸ್ ವಾಹನ ಖರೀದಿಗೆ ₹3.00 ಲಕ್ಷ ಸಬ್ಸಿಡಿ!

Online Railway Ticket Booking-ಟಿಕೆಟ್ ಬುಕ್ ಮಾಡುವ ವಿಧಾನ:

ಆಸಕ್ತ ಪ್ರವಾಸಿಗಳು ರೈಲ್ವೆ ಇಲಾಖೆಯ IRCTC ತಂತ್ರಾಂಶವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ "ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆಗೆ ಟಿಕೆಟ್ ಅನ್ನು ಬುಕ್ ಮಾಡಬಹುದು.

Step-1: ಮೊದಲು ಈ ವೆಬ್ಸೈಟ್ Online Railway Ticket Booking ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ IRCTC ಜಾಲತಾಣವನ್ನು ಪ್ರವೇಶ ಮಾಡಬೇಕು.

Railway Ticket

ಇದನ್ನೂ ಓದಿ: Ganga Kalyana 2025-ಗಂಗಾ ಕಲ್ಯಾಣ ಯೋಜನೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಬಲ ಬ್ದೈಯಲ್ಲಿ ಕಾಣುವ "Book Now" ಬಟನ್ ಮೇಲೆ ಕ್ಲಿಕ್ ಮಾಡಿ "Tour Starting Date: 25-JUN-2025" ಮತ್ತು ರೈಲು ಹತ್ತುವ ಸ್ಥಳ/Boarding Station, ರೈಲು ಇಳಿಯುವ ಸ್ಟೇಶನ್/Deboarding Station ಮತ್ತು ಒಟ್ಟು ಪ್ರವಾಸಿಗರ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು "Contiune" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಮೇಲಿನ ಹಂತ ಪೂರ್ಣಗೊಳಿಸಿದ ಬಳಿಕ ಇಲ್ಲಿ ಎರಡು ಆಯ್ಕೆಗಳು ಗೋಚರಿಸುತ್ತವೆ ಒಂದು IRCTC Login ಮತ್ತೊಂದು Guest User Login ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅಗತ್ಯ ಬಳಕೆದಾರ ಐಡಿಯನ್ನು ಹಾಕಿ ಲಾಗಿನ್ ಅಗಿ ಟಿಕೆಟ್ ಹಣವನ್ನು ಪಾವತಿ ಮಾಡಿ ಸಬ್ಸಿಡಿಯಲ್ಲಿ ಪ್ರವಾಸವನ್ನು ಕೈಗೊಳ್ಳಬಹುದು.

ಇದನ್ನೂ ಓದಿ: Business subsidy loan-ಸ್ವಂತ ಉದ್ಯೋಗ ಆರಂಭಿಸಲು ಸಬ್ಸಿಡಿಯಲ್ಲಿ ₹2 ಲಕ್ಷ ಪಡೆಯಲು ಅರ್ಜಿ!

Required Documents For Railway Ticket Booking-ಟಿಕೆಟ್ ಬುಕ್ ಮಾಡಲು ಅವಶ್ಯವಿರುವ ದಾಖಲೆಗಳು:

"ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆಗೆ ತೆರಲು ಆಸಕ್ತಿಯನ್ನು ಹೊಂದಿರುವ ಪ್ರವಾಸಿಗರು ತಮ್ಮ ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಲು ಪ್ರವಾಸಿಗರ ಆಧಾರ್ ಕಾರ್ಡ ವಿವರ, ಬ್ಯಾಂಕ್ ಪಾಸ್ ಬುಕ್ ವಿವರ ಮತ್ತು ಮೊಬೈಲ್ ನಂಬರ್ ಅನ್ನು ಸಲ್ಲಿಸಬೇಕಾಗುತ್ತದೆ.

Helpline Number-ಹೆಚ್ಚಿನ ಮಾಹಿತಿ ಪಡೆಯಲು:

Helpline-ಸಹಾಯವಾಣಿ ಸಂಖ್ಯೆ- 9363488229
IRCTC Booking Link-ರೈಲ್ವೆ ಟಿಕೆಟ್ ಬುಕ್ ಮಾಡಲು ವೆಬ್ಸೈಟ್ ಲಿಂಕ್- Book Now
ಧಾರ್ಮಿಕ ದತ್ತಿ ಇಲಾಖೆಯ ಅಧಿಕೃತ ತಂತ್ರಾಂಶ- Click Here

WhatsApp Group Join Now
Telegram Group Join Now
Share Now: