ತೆಂಗು ಅಭಿವೃದ್ಧಿ ಮಂಡಳಿಯಿಂದ ತೆಂಗು ಸಸಿ ವಿವರಣೆ ಮತ್ತು ಸಹಾಯಧನಕ್ಕೆ ಅರ್ಜಿಅಹ್ವಾನ.

June 24, 2023 | Siddesh

ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿಯ ಡಿ.ಎಸ್.ಪಿ ಫಾರ್ಮ್, ಮಂಡ್ಯದಲ್ಲಿ ಅತಿ ಹೆಚ್ಚು ಇಳುವರಿ ನೀಡುವ ಒಳ್ಳೆಯ ಗುಣಮಟ್ಟದ  ತೆಂಗಿನ ಸಸಿ ವಿವರಣೆ ಮತ್ತು ಸಹಾಯಧನಕ್ಕೆ ರೈತರಿಂದ ಅರ್ಜಿಅಹ್ವಾನ ಮಾಡಲಾಗಿದೆ.

ರೈತರು ನೇರವಾಗಿ ಇಲ್ಲಿಗೆ ಭೇಟಿ ಮಾಡಿ ತೆಂಗಿನ ಸಸಿ ಖರೀದಿಸಿ ಸಹಾಯಧನ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ನಮ್ಮ ರಾಜ್ಯದ ಡಿ.ಎಸ್.ಪಿ ಫಾರ್ಮ್, ಮಂಡ್ಯ ಜಿಲ್ಲೆಯ ಲೋಕಸರ ಗ್ರಾಮದಲ್ಲಿ ಅತಿ ಹೆಚ್ಚು ಇಳುವರಿ ನೀಡುವ ಒಳ್ಳೆಯ ಗುಣಮಟ್ಟದ ಬೀಜಕಾಯಿಗಳಿಂದ ಉತ್ಪಾದನೆ ಮಾಡಿದ ನಾಟಿ ತಳಿಯ ತೆಂಗಿನ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ. 

ಆಸಕ್ತ ರೈತ ಬಾಂಧವರು ಲೋಕಸರದಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿಯ ಕೆಲಸ ದಿನಗಳಲ್ಲಿ ಕಛೇರಿ ಸಮಯ ಬೆಳಿಗ್ಗೆ 8.00 ರಿಂದ ಸಂಜೆ 3.00ರ ಒಳಗೆ ಭೇಟಿ ನೀಡಿ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ಕೊಂಡುಕೊಳ್ಳಬಹುದು. 

ಒಂದು ನಾಟಿ ತೆಂಗಿನ ಸಸಿಯ ಬೆಲೆ ರೂ. 80/- ರೈತ ಬಾಂಧವರು ಗಮನಿಸಬೇಕಾದ ವಿಷಯವೆಂದರೆ ನಮ್ಮಲ್ಲಿ ತೆಂಗಿನ ಸಸಿಯನ್ನು ಕೊಂಡುಕೊಳ್ಳುವವರಿಗೆ ಅರ್ಧದಷ್ಟು ಹಣವನ್ನು ನೀವು ಮರಳಿ ಸಹಾಯಧನವಾಗಿ ಪಡೆಯಬಹುದು. 

ತೆಂಗಿನ ಸಸಿಗಳನ್ನು ಕೊಂಡುಕೊಳ್ಳುವಾಗ ಅದರ ಜೊತೆಯಲ್ಲಿ ಸಹಾಯಧನದ ಅರ್ಜಿಯನ್ನು ಕೂಡ ನೀಡಲಾಗುತ್ತದೆ. ತೆಂಗಿನ ಸಸಿಗಳನ್ನು ನೆಟ್ಟನಂತರ ರೈತರು ಅರ್ಜಿಯೊಂದಿಗೆ ನಾವು ಕೊಟ್ಟ ರಶೀದಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 08232-298015/ 9438803651/ 9945740889 ಗಳಿ ಸಂಪರ್ಕಿಸಿ ಎಂದು ಉಪ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಪ್ರಮುಖ ಸುದ್ದಿ: ಗೃಹ ಜ್ಯೋತಿ ಮಾರ್ಗಸೂಚಿ ಸಡಿಲಿಕೆ! ಕುಟುಂಬದ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ.


ಸಹಾಯಧನ ಅರ್ಜಿಗಳನ್ನು ಡೌನ್ಲೋಡ್ ಮಾಡುವ ಲಿಂಕ್ ವಿವರ:

ಸಹಾಯಧನ ಅರ್ಜಿ ಒಂದನೇ ವರ್ಷಕ್ಕೆ- https://coconutboard.gov.in/docs/AEPaplK1.pdf

ಸಹಾಯಧನ ಅರ್ಜಿ ಎರಡನೇ ವರ್ಷಕ್ಕೆ- https://coconutboard.gov.in/docs/AEPaplK2.pdf

ತೆಂಗು ಬೆಳೆಯ ಬೇಸಾಯ ಕ್ರಮಗಳ ಸಂಪೂರ್ಣ ಮಾಹಿತಿಯ ಕೈಪಿಡಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇನ್ನೂ ಹೆಚ್ಚಿನ ಮಾಹಿತಿಗಾಗಿ:

ತೆಂಗಿನ ಬೆಳೆ ಪೂರಕ ಎಲ್ಲಾ ಬಗ್ಗೆಯ ಉದ್ದಿಮೆ ಪ್ರಾರಂಬಿಸಲು ತೆಂಗು ಅಭಿವೃದ್ಧಿ ಮಂಡಳಿಯಿಂದ ಅರ್ಥಿಕವಾಗಿ ಮತ್ತು ತಾಂತ್ರಿಕ ಮಾಹಿತಿಯನ್ನು ಆಸಕ್ತರು ಪಡೆದುಕೊಳ್ಳಬವುದು ಹೆಚ್ಚಿನ ಮಾಹಿತಿ ಪಡೆಯಲು ತೆಂಗು ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ಕಚೇರಿ ವಿಳಾಸ: Director, Regional Office, Coconut Development Board, Hulimavu, Bannerghatta Road Bengaluru - 560 076 Karnataka. Mob: 080- 26593750, 26593743.

ತೆಂಗು ಅಭಿವೃದ್ಧಿ ಮಂಡಳಿಯ  ಜಾಲಾತಾಣ: https://coconutboard.gov.in//index.aspx

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: