Crop Survey App-ಮುಂಗಾರು ಬೆಳೆ ಸಮೀಕ್ಷೆಗೆ ರೈತರ ಆಪ್ ಬಿಡುಗಡೆ, ಜುಲೈ 25 ಕೊನೆಯ ದಿನ!

July 13, 2026 | Siddesh
Crop Survey App-ಮುಂಗಾರು ಬೆಳೆ ಸಮೀಕ್ಷೆಗೆ ರೈತರ ಆಪ್ ಬಿಡುಗಡೆ, ಜುಲೈ 25 ಕೊನೆಯ ದಿನ!
Share Now:

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆಯು 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ "ಮುಂಗಾರು ರೈತರ ಬೆಳೆಸಮೀಕ್ಷೆ 26-27" ಮೊಬೈಲ್ ಆಪ್ ಅನ್ನು(Crop Survey App) ಅಧಿಕೃತವಾಗಿ ಬಿಡುಗಡೆ ಮಾಡಿದೆ. "ನನ್ನ ಬೆಳೆ - ನನ್ನ ಹಕ್ಕು" ಎಂಬ ಘೋಷವಾಕ್ಯದೊಂದಿಗೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರಗಳನ್ನು ತಾವೇ ಸ್ವತಃ ಅಪ್‌ಲೋಡ್ ಮಾಡಲು ಈ ಮೂಲಕ ಮುಕ್ತ ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಮೊಬೈಲ್ ಮೂಲಕವೇ ನಿಖರವಾದ ಮಾಹಿತಿ ದಾಖಲಿಸಲು ಜುಲೈ 25, 2026 ಕೊನೆಯ ದಿನಾಂಕವಾಗಿದ್ದು, ಈ ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಈ ಮೊಬೈಲ್ ಆಪ್ ಅನ್ನು ಬಳಸಲು ರೈತರು ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಅಪ್ಲಿಕೇಶನ್(Bele Samikshe) ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ಪ್ರಕಟಣೆಯಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಬಹುದು. ತದನಂತರ FRUITS ತಂತ್ರಾಂಶದ FID ಸಂಖ್ಯೆಯನ್ನು ಹೊಂದಿರುವ ರೈತರು "ಇ-ಕೆವೈಸಿ ಮೂಲಕ ಆಧಾರ ದೃಢೀಕರಣ" ಆಯ್ಕೆಮಾಡಿ, ಆಧಾರ್ ಒಟಿಪಿ (OTP) ಹಾಗೂ ಮೊಬೈಲ್ ಒಟಿಪಿ ನಮೂದಿಸುವ ಮೂಲಕ ಆಪ್ ಅನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಒಂದು ವೇಳೆ FID ಸಂಖ್ಯೆಗೆ ಸರ್ವೇ ನಂಬರ್‌ಗಳು ಜೋಡಣೆಯಾಗದಿದ್ದರೆ, ಆಪ್‌ನಲ್ಲಿಯೇ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ದುಕೊಂಡು ಸರ್ವೇ ನಂಬರ್ ವಿವರಗಳನ್ನು ಸುಲಭವಾಗಿ ಜೋಡಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Fish Farming Subsidy-ಮೀನು ಸಾಕಾಣಿಕೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

ರೈತರು ಈ ಆಪ್ ಮೂಲಕ ತಮ್ಮ ಜಮೀನಿಗೆ ಖುದ್ದಾಗಿ ಭೇಟಿ ನೀಡಿ, ಪ್ರತಿ ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್‌ವಾರು ಜಮೀನಿನ ವಿಸ್ತೀರ್ಣದಲ್ಲಿ ಬೆಳೆದಿರುವ ಬೆಳೆಗಳ ನಿಖರ ಮಾಹಿತಿ ಹಾಗೂ ಜಮೀನಿನಲ್ಲಿರುವ ಬದು, ಹಳ್ಳ, ಮನೆ ಇತ್ಯಾದಿ ಪಾಳು ಬಿದ್ದಿರುವ ವಿಸ್ತೀರ್ಣದ ವಿವರಗಳನ್ನು ನಮೂದಿಸಬೇಕು. ಕೊನೆಯ ಹಂತದಲ್ಲಿ ರೈತರು ತಾವು ಬೆಳೆದ ಪ್ರತಿಯೊಂದು ಬೆಳೆಯ ಕನಿಷ್ಠ 2 ವಿಭಿನ್ನ ಭಾವಚಿತ್ರಗಳನ್ನು (Photos) ಜಿಪಿಎಸ್ ಆಧಾರಿತವಾಗಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಒಂದು ವೇಳೆ ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದಲ್ಲಿ, ಕೃಷಿ ಮತ್ತು ಇತರ ಇಲಾಖೆಗಳಿಂದ ದೊರೆಯುವ ವಿವಿಧ ಸರ್ಕಾರಿ ಸವಲತ್ತುಗಳಿಂದ ರೈತರು ವಂಚಿತರಾಗಲಿದ್ದಾರೆ ಎಂದು ಇಲಾಖೆ ಎಚ್ಚರಿಸಿದೆ.

Farmer Crop Survey Last Date-ರೈತರು ಬೆಳೆ ಮಾಹಿತಿ ದಾಖಲಿಸಲು ಜುಲೈ 25 ಕೊನೆಯ ದಿನ:

ಮುಂಗಾರು ಬೆಳೆ ಸಮೀಕ್ಷೆ ಮಾಡಲು 25 ಜುಲೈ 2026 ಕೊನೆಯ ದಿನಾಂಕವಾಗಿದ್ದು, ಇದಾದ ಬಳಿಕ ಕೃಷಿ ಇಲಾಖೆಯಿಂದ ಖಾಸಗಿ ನಿವಾಸಿ(PR) ಮೂಲಕ ಬೆಳೆ ಸಮೀಕ್ಷೆಯನ್ನು ಮಾಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Crop Survey Application-ರೈತರು ತಮ್ಮ ಮೊಬೈಲ್ ನಲ್ಲಿ ಸಮೀಕ್ಷೆಯನ್ನು ಮಾಡುವುದು ಹೇಗೆ?

ಕೃಷಿಕರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆಯನ್ನು ಮಾಡಲು ಕೃಷಿ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: PUC Scholorship-ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ₹30,000 ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

Step-1: ಮೊಬೈಲ್ ಆಪ್ ಡೌನ್‌ಲೋಡ್ ಮಾಡುವುದು:

ಮೊದಲಿಗೆ ರೈತರು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ-ಸ್ಟೋರ್‌ಗೆ (Google Play Store) ಹೋಗಿ "ಮುಂಗಾರು ರೈತರ ಬೆಳೆ ಸಮೀಕ್ಷೆ 26-27" ಎಂದು ಹುಡುಕಿ ಅಥವಾ ಈ ಲಿಂಕ್ "Crop Survey Application" ಮೇಲೆ ಕ್ಲಿಕ್ ಮಾಡಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

bele samikshe app

Step-2: ಆಧಾರ್ ದೃಢೀಕರಣ (ಇ-ಕೆವೈಸಿ):

ಅಪ್ಲಿಕೇಸನ್ ಅನ್ನು ಓಪನ್ ಮಾಡಿದ ನಂತರ, FRUITS ತಂತ್ರಾಂಶದ FID ಸಂಖ್ಯೆಯನ್ನು ಹೊಂದಿರುವ ರೈತರು "ಇ-ಕೆವೈಸಿ ಮೂಲಕ ಆಧಾರ ದೃಢೀಕರಣ" ಎಂಬ ಆಯ್ಕೆಯನ್ನು ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, Generate OTP ಆಯ್ಕೆಯನ್ನು ಒತ್ತಬೇಕು.

Step-3: ಒಟಿಪಿ (OTP) ಪರಿಶೀಲನೆ:

ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ ಆಧಾರ್ OTP ಯನ್ನು ಮೊದಲು ದಾಖಲಿಸಬೇಕು.

ಇದರ ಬೆನ್ನಲ್ಲೇ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅದಕ್ಕೆ ಬರುವ 4 ಅಂಕಿಯ ಮೊಬೈಲ್ OTP ಯನ್ನು ನಮೂದಿಸಿ ಆಪ್ ಅನ್ನು ಸಕ್ರಿಯಗೊಳಿಸಬೇಕು.

ಇದನ್ನೂ ಓದಿ: Ration Card-ರೇಷನ್ ಕಾರ್ಡದಾರರೇ ಗಮನಿಸಿ: ಇ-ಕೆವೈಸಿ ಕಡ್ಡಾಯ, ಕಾರ್ಡಿನ ಸದಸ್ಯರ ಆಧಾರದ ಮೇಲೆ ಅಕ್ಕಿ ಮತ್ತು ಜೋಳ!

Step-4: ಸರ್ವೇ ನಂಬರ್ ವಿವರಗಳ ಜೋಡಣೆ:

ಆಪ್ ಲಾಗಿನ್ ಆದ ತಕ್ಷಣ ರೈತರ FID ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿ ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್ ಆಗುತ್ತದೆ. ಒಂದು ವೇಳೆ ನಿಮ್ಮ ಯಾವುದೇ ಸರ್ವೇ ನಂಬರ್ ಜೋಡಣೆಯಾಗದಿದ್ದರೆ, ಆಪ್‌ನಲ್ಲಿರುವ "ಸರ್ವೇ ನಂಬರ್ ಸೇರಿಸಿ" ಆಯ್ಕೆಯನ್ನು ಬಳಸಿ.

ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಗ್ರಾಮವನ್ನು ಆಯ್ಕೆ ಮಾಡಿ, ಸರ್ವೇ ನಂಬರ್ ನಮೂದಿಸಿ "ಸರ್ವೇ ನಂ ವಿವರವನ್ನು ಪಡೆಯಿರಿ" ಎಂದು ಒತ್ತಬೇಕು. ನಂತರ ಬರುವ ಜಮೀನಿನ ಮಾಲೀಕರ ವಿವರವನ್ನು ಪರಿಶೀಲಿಸಿ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

Step-5: ಜಮೀನಿನಲ್ಲಿ ಬೆಳೆ ವಿವರ ದಾಖಲಿಸುವುದು:

ಈಗ ರೈತರು ನೇರವಾಗಿ ತಮ್ಮ ಹೊಲಕ್ಕೆ/ಜಮೀನಿಗೆ ಖುದ್ದಾಗಿ ಭೇಟಿ ನೀಡಬೇಕು. ಜಮೀನಿನಲ್ಲಿ ನಿಂತು, ಆಯಾ ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್‌ವಾರು ವಿಸ್ತೀರ್ಣದಲ್ಲಿ ತಾವು ಬೆಳೆದಿರುವ ಬೆಳೆಗಳ ವಿವರಗಳನ್ನು ಸರಿಯಾಗಿ ನಮೂದಿಸಬೇಕು.

ಇದೇ ಹಂತದಲ್ಲಿ ಜಮೀನಿನಲ್ಲಿ ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗಿರುವ ಅಥವಾ ಪಾಳು ಬಿದ್ದಿರುವ ಪ್ರದೇಶಗಳ (ಉದಾಹರಣೆಗೆ: ಬದು, ಬಾವಿ, ಮನೆ, ರಸ್ತೆ, ಕಲ್ಲುಬಂಡೆ ಇತ್ಯಾದಿ) ವಿವರಗಳನ್ನು ಸಹ ಕಡ್ಡಾಯವಾಗಿ ದಾಖಲಿಸಬೇಕು.

ಇದನ್ನೂ ಓದಿ: KSOU Admission-2026-ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ!

Step-6: ಜಿಪಿಎಸ್ ಆಧಾರಿತ ಭಾವಚಿತ್ರ ಅಪ್‌ಲೋಡ್:

ಕೊನೆಯದಾಗಿ, ರೈತರು ತಾವು ಜಮೀನಿನಲ್ಲಿ ಬೆಳೆದಿರುವ ಪ್ರತಿ ಮುಖ್ಯ ಬೆಳೆಯ ಕನಿಷ್ಠ 2 ವಿಭಿನ್ನ ಭಾವಚಿತ್ರಗಳನ್ನು (Photos) ಆಪ್ ಮೂಲಕವೇ ಜಿಪಿಎಸ್ (GPS) ಲೊಕೇಶನ್ ಆಧಾರದ ಮೇಲೆ ತೆಗೆದು ಅಪ್‌ಲೋಡ್ ಮಾಡಬೇಕು ಕೊನೆಯಲ್ಲಿ ಎಲ್ಲಾ ವಿವರವನ್ನು ಅಪ್ಲೋಡ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಸಮೀಕ್ಷೆಯ ಮಾಹಿತಿಯನ್ನು Upload ಮಾಡಿ.

Crop Survey Importance-ಬೆಳೆ ಸಮೀಕ್ಷೆ ಏಕೆ ಮುಖ್ಯ?

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಪ್ರಕಾರ, ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ (Crop Survey) ಮೂಲಕ ಅಪ್‌ಲೋಡ್ ಮಾಡುವುದು ಅತ್ಯಂತ ಮುಖ್ಯವಾಗಿದೆ. ಇದರ ಪ್ರಮುಖ ಉಪಯೋಗಗಳು ಮತ್ತು ಪ್ರಾಮುಖ್ಯತೆ ಇಲ್ಲಿದೆ:

1) ಬೆಳೆ ಸಾಲ ಸೌಲಭ್ಯ (Crop Loan): ಬ್ಯಾಂಕುಗಳಲ್ಲಿ ಅಥವಾ ಸಹಕಾರ ಸಂಘಗಳಲ್ಲಿ ರೈತರು ಬೆಳೆ ಸಾಲ ಪಡೆಯಲು ಪಹಣಿಯಲ್ಲಿ ಬೆಳೆ ವಿವರ ದಾಖಲಾಗಿರುವುದು ಕಡ್ಡಾಯವಾಗಿದೆ. ಸಮೀಕ್ಷೆಯ ಆಧಾರದ ಮೇಲೆಯೇ ಸಾಲದ ಮೊತ್ತ ನಿರ್ಧಾರವಾಗುತ್ತದೆ.

2) ಬೆಳೆ ವಿಮೆ ಪರಿಹಾರ (Crop Insurance): ಪ್ರಕೃತಿ ವಿಕೋಪ, ಬರಗಾಲ ಅಥವಾ ಅತಿಯಾದ ಮಳೆಯಿಂದ ಬೆಳೆ ನಷ್ಟವಾದಾಗ ವಿಮಾ ಮೊತ್ತವನ್ನು (Crop Insurance Claim) ಪಡೆಯಲು ಈ ಸಮೀಕ್ಷೆಯೇ ಮುಖ್ಯ ಆಧಾರವಾಗಿರುತ್ತದೆ. ನೀವು ಆಪ್‌ನಲ್ಲಿ ಯಾವ ಬೆಳೆ ದಾಖಲಿಸಿರುತ್ತೀರೋ, ಅದಕ್ಕೆ ಮಾತ್ರ ವಿಮೆ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: Sasya Santhe 2026-ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಜುಲೈ 10 ರಿಂದ ಮೂರು ದಿನಗಳ ಕಾಲ ‘ಸಸ್ಯ ಸಂತೆ’

3) ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿ (MSP Procurement): ಸರ್ಕಾರವು ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರೈತರಿಂದ ನೇರವಾಗಿ ಧಾನ್ಯಗಳನ್ನು ಖರೀದಿಸುವಾಗ (ಉದಾಹರಣೆಗೆ ಭತ್ತ, ರಾಗಿ, ಜೋಳ ಇತ್ಯಾದಿ), ಬೆಳೆ ಸಮೀಕ್ಷೆಯ ದತ್ತಾಂಶವನ್ನು ಪರಿಶೀಲಿಸಿಯೇ ರೈತರ ನೋಂದಣಿ ಮಾಡಿಕೊಳ್ಳುತ್ತದೆ.

4) ಬೆಳೆ ನಷ್ಟ ಪರಿಹಾರ (Input Subsidy/Compensation): ಭೀಕರ ಬರಗಾಲ ಅಥವಾ ಪ್ರವಾಹ ಬಂದಾಗ ಸರ್ಕಾರ ಘೋಷಿಸುವ 'ಬೆಳೆ ಇನ್‌ಪುಟ್ ಸಬ್ಸಿಡಿ' ಅಥವಾ ಪರಿಹಾರ ಧನ ನೇರವಾಗಿ ರೈತರ ಖಾತೆಗೆ (DBT ಮೂಲಕ) ಜಮೆಯಾಗಲು ಈ ಜಿಪಿಎಸ್ ಆಧಾರಿತ ಬೆಳೆ ಸಮೀಕ್ಷೆಯ ಮಾಹಿತಿಯೇ ಮೂಲಬುನಾದಿಯಾಗಿದೆ.

5) ಪಹಣಿಯಲ್ಲಿ (RTC) ನಿಖರ ದಾಖಲಾತಿ: ನಿಮ್ಮ ಜಮೀನಿನ ಆರ್‌.ಟಿ.ಸಿ ಅಥವಾ ಪಹಣಿ ಪತ್ರದಲ್ಲಿ ಈ ವರ್ಷ ನೀವು ಯಾವ ಬೆಳೆ ಬೆಳೆದಿದ್ದೀರಿ ಎಂಬ ಅಧಿಕೃತ ವಿವರ ದಾಖಲಾಗುತ್ತದೆ. ಇದು ಭವಿಷ್ಯದಲ್ಲಿ ಜಮೀನಿನ ಮಾಲೀಕತ್ವ ಮತ್ತು ಕೃಷಿ ಚಟುವಟಿಕೆಗಳ ಕಾನೂನಾತ್ಮಕ ಪುರಾವೆಯಾಗಿ ಕೆಲಸ ಮಾಡುತ್ತದೆ.

⚠️ ಗಮನಿಸಿ: ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದರೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳು ನೀಡುವ ಸಬ್ಸಿಡಿಗಳು, ಸ್ಪ್ರೇಯರ್, ಟ್ರ್ಯಾಕ್ಟರ್ ಮುಂತಾದ ಕೃಷಿ ಯಂತ್ರೋಪಕರಣಗಳ ಸವಲತ್ತುಗಳಿಂದ ನೀವು ವಂಚಿತರಾಗಬೇಕಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: