Cashewnut farming subsidy-ಗೇರು ಕೃಷಿ ಮಾಡಲು ₹1.20 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

June 11, 2025 | Siddesh
Cashewnut farming subsidy-ಗೇರು ಕೃಷಿ ಮಾಡಲು ₹1.20 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Share Now:

ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಕೇಂದ್ರದಿಂದ ಗೇರು ಕೃಷಿ ಮಾಡಲು(Cashewnut farming subsidy)ಆಸಕ್ತಿಯನ್ನು ಹೊಂದಿರುವ ಅರ್ಹ ರೈತರಿಗೆ ಹನಿ ನೀರಾವರಿ ಮತ್ತು ಗೇರು ಸಸಿಗಳನ್ನು ಖರೀದಿಸಲು ಆರ್ಥಿಕ ನೆರವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇದರ 'ಹೊಸ ಗೇರು ತಳಿಗಳ ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ(Cashewnut farming) (ಸಾಮಾನ್ಯ ಪದ್ದತಿ) ಮತ್ತು ಹೊಸ ಮತ್ತು ಹಳೆಯ ಸೂಕ್ತ ಗೇರು ತಳಿಗಳ ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ (ಸಾಂದ್ರ ಪದ್ಧತಿ)' ಯೋಜನೆ ಅಡಿಯಲ್ಲಿ 2025-26 ನೇ ಸಾಲಿನ ಹನಿ ನೀರಾವರಿ ವ್ಯವಸ್ಥೆಯಲ್ಲಿ ಗೇರು ಕೃಷಿಗೆ ಆರ್ಥಿಕ ಸಹಾಯಕ್ಕೆ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: Nigama Yojanegalu-ರಾಜ್ಯ ಸರ್ಕಾರದ ನಿಗಮಗಳಿಂದ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ!

ಗೇರು ಕೃಷಿಗೆ ಸಬ್ಸಿಡಿಯನ್ನು(Godambi Krishi) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ಮಾನದಂಡಗಳೇನು? ಅರ್ಜಿ ಸಲ್ಲಿಸಲು ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2025

Who Can Apply-ಅರ್ಜಿ ಸಲ್ಲಿಸಲು ಮಾನದಂಡಗಳು:

A) ಸಾಮಾನ್ಯ ಪದ್ಧತಿ (ಹನಿ ನೀರಾವರಿ ವ್ಯವಸ್ಥೆಯಲ್ಲಿ) (7 ಮೀ x 7 ಮೀ)

1) ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ (FLTD) ಯನ್ನು ಕನಿಷ್ಠ ಒಂದು ಎಕರೆ ಅಥವಾ ಗರಿಷ್ಠ ಎರಡೂವರೆ ಎಕರೆ ಪ್ರದೇಶದಲ್ಲಿ ಕೈಗೊಳ್ಳಬೇಕು

2) ಪ್ರಾತ್ಯಕ್ಷಿಕೆಯನ್ನು 7 ಮೀ x 7 ಮೀ ಅಂತರದಲ್ಲಿ ಪ್ರತಿ ಎಕರೆಗೆ 80 ಗಿಡಗಳೊಂದಿಗೆ ಅಥವಾ ಹೆಕ್ಟೇರ್‌ಗೆ 200 ಸಸ್ಯಗಳೊಂದಿಗೆ ಸ್ಥಾಪಿಸಬೇಕು.

ಇದನ್ನೂ ಓದಿ: Bank Account-ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ!ಈ ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವಿಲ್ಲ!

3) ನೇತ್ರ ಗಂಗಾ, ನೇತ್ರ ಜಂಬೋ-1, ನೇತ್ರ ಜಂಬೋ-2, ನೇತ್ರ ಉಭಯ ಮತ್ತು ಭಾಸ್ಕರ ಎಂಬ ಐದು ತಳಿಗಳ ಕಸಿಗಿಡಗಳನ್ನು ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇಲ್ಲಿನ ನರ್ಸರಿಯಿಂದ ಖರೀದಿಸಬೇಕು ಅವುಗಳಲ್ಲಿ ಮೂರು ತಳಿಗಳ ಗಿಡಗಳನ್ನು ನೆಡುವುದು ಕಡ್ಡಾಯವಾಗಿದೆ.

4) ಗೋಡಂಬಿ ಕೃಷಿಯಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ ಮತ್ತು ಹನಿ ನೀರಾವರಿ ವ್ಯವಸ್ಥೆಯ ವಸ್ತುಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮಾನದಂಡಗಳ ಪ್ರಕಾರ ರಾಜ್ಯ/ಕೇಂದ್ರ ಸರ್ಕಾರ ಅನುಮೋದಿಸಿದ ಸಂಸ್ಥೆಗಳ ಮೂಲಕ ಮಾತ್ರ ಖರೀದಿಸಬೇಕು (ಅನುಬಂಧ-1 ರಲ್ಲಿ ಪಟ್ಟಿ ಮಾಡಲಾಗಿದೆ)

5) ಹಣಕಾಸಿನ ನೆರವು ಎಕರೆಗೆ ರೂ ₹30,000/- ಅಥವಾ ಹೆಕ್ಟೇರ್‌ಗೆ ರೂ ₹75,000/-

6) ಹಣಕಾಸಿನ ನೆರವು ನೆಟ್ಟ ಗಿಡಗಳ ವೆಚ್ಚ ಮತ್ತು ಪೋಷಕಾಂಶ ಮತ್ತು ಕೀಟ ನಿರ್ವಹಣೆ ಮತ್ತು ಹನಿ ನೀರಾವರಿ ಘಟಕದ ವಸ್ತುಗಳ ವೆಚ್ಚಕ್ಕೆ ಸೀಮಿತವಾಗಿದೆ ಮತ್ತು ಇದು 2025-26 ರ ಹಣಕಾಸು ವರ್ಷಕ್ಕೆ ಅನ್ವಯಿಸುತ್ತದೆ.

7) DCCD ಮೂಲಕ MIDH ಅಡಿಯಲ್ಲಿ ನೀಡಲಾದ ಯೋಜನೆಯ ಹೆಸರು ಮತ್ತು ಹಣಕಾಸಿನ ನೆರವನ್ನು ಬಿಂಬಿಸುವ ಕ್ಷೇತ್ರ ಫಲಕವನ್ನು ಹಾಕಬೇಕು.

8) ಕ್ಷೇತ್ರಭೇಟಿ ಹಾಗೂ ಪರಿಶೀಲನೆಯ ನಂತರ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಹಾಕಲಾಗುವುದು.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆಯಡಿ 20ನೇ ಕಂತಿನ ಹಣ ಬಿಡುಗಡೆ!

B) ಸಾಂದ್ರ ಪದ್ಧತಿ:

1) ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ (FLTD) ಯನ್ನು ಕನಿಷ್ಠ ಒಂದು ಎಕರೆ ಅಥವಾ ಗರಿಷ್ಠ ಎರಡೂವರೆ ಎಕರೆ ಪ್ರದೇಶದಲ್ಲಿ ಕೈಗೊಳ್ಳಬೇಕು.

2) ಪ್ರಾತ್ಯಕ್ಷಿಕೆಯನ್ನು 4 ಮೀ x 4 ಮೀ ಅಂತರದಲ್ಲಿ ಪ್ರತಿ ಎಕರೆಗೆ 250 ಗಿಡಗಳೊಂದಿಗೆ ಅಥವಾ ಹೆಕ್ಟೇರ್‌ಗೆ 625 ಸಸ್ಯಗಳೊಂದಿಗೆ ಸ್ಥಾಪಿಸಬೇಕು.

3) VRI-3 ಅಥವಾ Bidhan Bonsai Kaju ಅಥವಾ ನೇತ್ರ ವಾಮನ ಎಂಬ ತಳಿಗಳನ್ನು ನೆಡುವುದು ಕಡ್ಡಾಯವಾಗಿದೆ ಮತ್ತು ಈ ತಳಿಗಳ ಕಸಿಗಿಡಗಳನ್ನು ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇಲ್ಲಿನ ನರ್ಸರಿಯಿಂದ ಪಡೆಯಬೆರಳು.

4) ಗೋಡಂಬಿ ಕೃಷಿಯಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ ಮತ್ತು ಹನಿ ನೀರಾವರಿ ವ್ಯವಸ್ಥೆಯ ವಸ್ತುಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮಾನದಂಡಗಳ ಪ್ರಕಾರ ರಾಜ್ಯ/ಕೇಂದ್ರ ಸರ್ಕಾರ ಅನುಮೋದಿಸಿದ ಸಂಸ್ಥೆಗಳ ಮೂಲಕ ಮಾತ್ರ ಖರೀದಿಸಬೇಕು (ಅನುಬಂಧ-1 ರಲ್ಲಿ ಪಟ್ಟಿ ಮಾಡಲಾಗಿದೆ).

Cashewnut farming subsidy

ಇದನ್ನೂ ಓದಿ: Education Loan-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

5) ಹಣಕಾಸಿನ ನೆರವು ಎಕರೆಗೆ ರೂ ₹45,000/- ಅಥವಾ ಹೆಕ್ಟೇರ್‌ಗೆ ರೂ ₹1,12,000/-

6) ಹಣಕಾಸಿನ ನೆರವು ನೆಟ್ಟ ಗಿಡಗಳ ವೆಚ್ಚ ಮತ್ತು ಪೋಷಕಾಂಶ ಮತ್ತು ಕೀಟ ನಿರ್ವಹಣೆ ಮತ್ತು ಹನಿ ನೀರಾವರಿ ಘಟಕದ ವಸ್ತುಗಳ ವೆಚ್ಚಕ್ಕೆ ಸೀಮಿತವಾಗಿದೆ ಮತ್ತು ಇದು 2025-26 ರ ಹಣಕಾಸು ವರ್ಷಕ್ಕೆ ಅನ್ವಯಿಸುತ್ತದೆ.

7) DCCD ಮೂಲಕ MIDH ಅಡಿಯಲ್ಲಿ ನೀಡಲಾದ ಯೋಜನೆಯ ಹೆಸರು ಮತ್ತು ಹಣಕಾಸಿನ ನೆರವನ್ನು ಬಿಂಬಿಸುವ ಕ್ಷೇತ್ರ ಫಲಕವನ್ನು ಹಾಕಬೇಕು.

8) ಕ್ಷೇತ್ರಭೇಟಿ ಹಾಗೂ ಪರಿಶೀಲನೆಯ ನಂತರ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಹಾಕಲಾಗುವುದು.

ಇದನ್ನೂ ಓದಿ: Car Subsidy Application-₹3.0 ಲಕ್ಷ ಸಬ್ಸಿಡಿಯಲ್ಲಿ ಕಾರು ಖರೀದಿ ಮಾಡಲು ಅರ್ಜಿ!

Required Documents-ಅರ್ಜಿ ಸಲ್ಲಿಸಲು ದಾಖಲೆಗಳು:

ಆಧಾರ್ ಕಾರ್ಡ/Aadhar
ಆರ್.ಟಿ.ಸಿ/RTC
ಬ್ಯಾಂಕ್ ಪಾಸ್ ಬುಕ್/Bank Pass Book
ಹನಿ ನೀರಾವರಿ ವ್ಯವಸ್ಥೆ ಖರೀದಿ ರಶೀದಿ/Drip Irrigation Bill
ಪೋಟೋ/Photo
ನರ್ಸರಿಯಿಂದ ಗಿಡ ಖರೀದಿಸಿದ ರಸೀದಿ/Nursery Bill

For More Information-ಅರ್ಜಿ ಕಳುಹಿಸಬೇಕಾದ ವಿಳಾಸ ಮತ್ತು ಹೆಚ್ಚಿನ ಮಾಹಿತಿಗಾಗಿ:

ಡಾ. ಈರದಾಸಪ್ಪ,
ಹಿರಿಯ ವಿಜ್ಞಾನಿಗಳು
ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು 574 202
ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ
ಮೊಬೈಲ್ ಸಂಖ್ಯೆ: 9916074454

ಇದನ್ನೂ ಓದಿ: Vibhuti Ghataka Subsidy- ₹4.00 ಲಕ್ಷದಲ್ಲಿ ವಿಭೂತಿ ಘಟಕ ಸ್ಥಾಪನೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ!

Application Download link-ಅರ್ಜಿ ನಮೂನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ- Download Now
Scheme Notification-ಅಧಿಕೃತ ಪ್ರಕಟಣೆ-Click Here

WhatsApp Group Join Now
Telegram Group Join Now
Share Now: