Ginger Crop-ಶುಂಠಿಗೆ ಎಲೆಚುಕ್ಕೆ ಕಾಟ ರೈತರ ನೆರವಿಗೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ!

July 25, 2025 | Siddesh
Ginger Crop-ಶುಂಠಿಗೆ ಎಲೆಚುಕ್ಕೆ ಕಾಟ ರೈತರ ನೆರವಿಗೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ!
Share Now:

ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್‍ನಲ್ಲಿ ಕುಶಾಲನಗರದ ಕೆಲವು ಕಡೆ ಕಾಣಿಸಿಕೊಂಡ ಬೆಂಕಿ ರೋಗ, ಈ ವರ್ಷ ಹಾಸನ(Hassan), ಮೈಸೂರು(Mysuru) ಮತ್ತು ಚಿಕ್ಕಮಗಳೂರು ಜಿಲ್ಲೆಯ(Chikkamagaluru) ಅನೇಕ ಕಡೆ ವ್ಯಾಪಕವಾಗಿ ಕಾಣಿಸಿಕೊಂಡು ಶುಂಠಿ ಬೆಳೆಯನ್ನು ಹಲವೆಡೆ ಬಾಧಿಸಿದೆ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ವಹಣಾ ಕ್ರಮ ತೆಗೆದುಕೊಳ್ಳದಿದ್ದರೆ ಎರಡು-ಮೂರು ವಾರಗಳೊಳಗೆ ಬೆಳೆ ಸಂಪೂರ್ಣ ಒಣಗಿಬಿಡುತ್ತದೆ.

ಈ ವರ್ಷ ಮಳೆಯು ಕಳೆದ ವರ್ಷದ ವಾಡಿಕೆಗಿಂತ ಮುನ್ನವೇ ಪ್ರಾರಂಭವಾಗಿದೆ ಹಾಗೂ ಬಹಳಷ್ಟು ಕಡೆ ಹೆಚ್ಚಿನ ಮಳೆ ಮೇ ಮಾಹೆಯಿಂದ ಇಲ್ಲಿಯವರೆವಿಗೂ ಬರುತ್ತಲೇ ಇದೆ. ಇದುವೇ ರೋಗ ಉಲ್ಬಣವಾಗಲು ಪ್ರಮುಖ ಕಾರಣ. ತ್ವರಿತವಾಗಿ ರೋಗ ಹರಡಲು ಮತ್ತಷ್ಟು ಪೂರಕ/ಅನುಕೂಲಕರ ಅಂಶಗಳೆಂದರೆ ಮೋಡ, ತಗ್ಗಿದ ಉಷ್ಣಾಂಶ, ತುಂತುರು ಮಳೆ, ಮೋಡ ಮುಸುಕಿದ ವಾತಾವರಣ, ಕಡಿಮೆ ಬಿಸಿಲು, ಮಣ್ಣಿನಲ್ಲಿ ಹೆಚ್ಚಿರುವ ತೇವಾಂಶ, ಸೂಕ್ತ ಬಸಿಗಾಲುವೆ ಇಲ್ಲದಿರುವುದು ಹಾಗೂ ವೇಗವಾಗಿ ಬೀಸುವ ಗಾಳಿ. ರೈತರು ಇದಕ್ಕೆ ಬೆಂಕಿ ರೋಗ, ದೊಮ್ಮೆ ರೋಗ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದಾರೆ.

ಇದನ್ನೂ ಓದಿ: Karnataka Cabinet Decisions-ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ: ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ!

ತೆಂಗಿನ ತೋಟಗಳಲ್ಲಿ(Horticulture) ಶುಂಠಿ ಬೆಳೆದಿರುವ ಕಡೆ ರೋಗ ಹೆಚ್ಚು ಉಲ್ಬಣವಾಗಿರುವುದನ್ನು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ತಂಡ ಜುಲೈ ಮೂರನೇ ವಾರ ಕೊಡುಗು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸರ್ವೇಕ್ಷಣೆ ನಡೆಸುವಾಗ ತಿಳಿದುಬಂದಿದೆ. ಕೆಲವು ಪತ್ರಿಕಾ ವರದಿ / ಸುದ್ದಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿರುವಂತೆ ಇದು ಖಂಡಿತವಾಗಿ ಯಾವುದೇ ‘ವೈರಸ್ (ನಂಜಾಣು)ʼನಿಂದ ಬಂದಿರುವ ರೋಗವಲ್ಲ. ಬದಲಾಗಿ ಇದು ಶಿಲೀಂಧ್ರ ಮೂಲದ ರೋಗವಾಗಿದೆ.

Reason For Ginger leaf curl and blight disease-ಯಾವ ಯಾವ ಶಿಲೀಂಧ್ರಗಳು ಈ ಎಲೆಚುಕ್ಕೆ ರೋಗಕ್ಕೆ ಕಾರಣವೇನು?

ಶುಂಠಿಗೆ ಎಲೆಚುಕ್ಕೆ ರೋಗ ಹೊಸದೇನಲ್ಲ. ಆದರೆ ಇಷ್ಟು ತೀವ್ರವಾಗಿ ಈ ಮೊದಲು ಬರುತ್ತಿರಲಿಲ್ಲ ಹಾಗೂ ಸುಲಭವಾಗಿ ನಿರ್ವಹಿಸಬಹುದಿತ್ತು. ಈ ಹಂಗಾಮಿನಲ್ಲೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಸರ್ವೇಕ್ಷಣೆಯ ಪ್ರಕಾರ ವಿವಿಧ ರೀತಿಯ ಶಿಲೀಂಧ್ರ (ಫಂಗಸ್)ಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಪ್ರಮುಖವಾಗಿ ಪೈರಿಕ್ಯುಲೇರಿಯಾ (ಭತ್ತದ ಬೆಂಕಿ ರೋಗಕ್ಕೆ ಕಾರಣವಾದ ಶಿಲೀಂಧ್ರದ ಜಾತಿಗೆ ಸೇರಿದ್ದು), ಫಿಲ್ಲೋಸ್ಟಿಕ್ಟ ಹಾಗೂ ಕೊಲ್ಲೆಟೋಟ್ರೈಕಂ ಬಗೆಗಳು.

ಇವುಗಳ ಪೈಕಿ ಪೈರಿಕ್ಯುಲೇರಿಯಾ ಅತಿ ಶೀಘ್ರವಾಗಿ ಹರಡುವ ರೋಗಾಣುವಾಗಿದೆ. (ಪೈರಿಕ್ಯುಲೇರಿಯಾದ ಪ್ರಬೇಧ ದೃಢಪಡಿಸುವ ಸಲುವಾಗಿ ರೋಗದ ಮಾದರಿಯನ್ನು ಹೈದರಾಬಾದಿನ ರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ).

ಇದನ್ನೂ ಓದಿ: Agriscience Scholarship-ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್ ಅರ್ಜಿ ಆಹ್ವಾನ! ₹35,000 ವಿದ್ಯಾರ್ಥಿವೇತನ!

ತೋಟಗಾರಿಕಾ ವಿಶ್ವವವಿದ್ಯಾನಿಲಯವು(University of Horticultural Sciences, Bagalkot) ಸರ್ವೇಕ್ಷಣೆ ನಡೆಸಿದ ಕೊಡಗು (ಕುಶಾಲನಗರ) ಮೈಸೂರು (ಪಿರಿಯಾಪಟ್ಟಣ, ಹುಣಸೂರು) ಮತ್ತು ಹಾಸನ (ಅರಕಲಗೂಡು) ಜಿಲ್ಲೆಗಳಲ್ಲಿನ ಶುಂಠಿ ತಾಕುಗಳಲ್ಲಿ ಈ ರೋಗ ಲಕ್ಷಣಗಳು ಮತ್ತು ರೋಗಾಣುಗಳು ಕಂಡು ಬಂದಿವೆ.

ಕುಶಾಲನಗರ ಮತ್ತು ಅರಕಲಗೂಡು ಭಾಗಗಳಲ್ಲಿ ರೋಗ ಹರಡಲು ಪೂರಕವಾದ ಅಂಶಗಳಿರುವುದರಿಂದ ಬಹಳಷ್ಟು ಕಡೆ ತುಸು ಹೆಚ್ಚೇ ಚುಕ್ಕೆ ಮತ್ತು ಬೆಂಕಿ ರೋಗ ಕಂಡು ಬಂದಿದೆ. ಉಳಿದಂತೆ ಮಳೆ ಕಡಿಮೆ ಇರುವ ಮತ್ತು ಶುಷ್ಕ ವಾತಾವರಣ ಅಥವಾ ಆಧ್ರ್ರತೆ ಕಡಿಮೆಯಿರುವ ತಾಲ್ಲೂಕುಗಳಲ್ಲಿ ರೋಗದ ಸಮಸ್ಯೆ ಕಡಿಮೆಯಿದೆ.

ಬಳಸುತ್ತಿರುವ ಔಷಧಗಳು ಸರಿಯಾಗಿ ಕೆಲಸ ಮಾಡದಿರಲು ಪ್ರಮುಖ ಕಾರಣ – ನಿರಂತರ ಮಳೆ (ಸಿಂಪಡಣೆಗೆ ಬಿಡುವು ಕೊಡದಷ್ಟು) ಶಿಲೀಂಧ್ರನಾಶಕಗಳ ಜೊತೆ ಬೆಳೆ ಉತ್ತೇಜಕಗಳು, ಹಾರ್ಮೋನುಗಳು, ಅಮೈನೋ ಆಮ್ಲ, ಕಡಲಪಾಚಿ ಆಧಾರಿತ ಉತ್ಪನ್ನಗಳ ಬಳಕೆ, ಉತ್ಪನ್ನಗಳ ಹೊಂದಾಣಿಕೆ ಅರಿವಿಲ್ಲದೆಯೇ ಒಮ್ಮೆಗೆ ನಾಲ್ಕಾರು ಉತ್ಪನ್ನಗಳನ್ನು ಬಳಸುವುದು. ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದ ಔಷಧಗಳ ಬಳಕೆ ರೋಗವನ್ನು ನಿಯಂತ್ರಿಸುವಲ್ಲಿ ಪ್ರಮುಖ ತೊಡಕಾಗಿವೆ.

ಇದನ್ನೂ ಓದಿ: UPI Payment-ಆಗಸ್ಟ್ 1, 2025 ರಿಂದ UPI ಪಾವತಿಗೆ ಹೊಸ ನಿಯಮಗಳು: ಏನೆಲ್ಲ ಬದಲಾವಣೆ?

Ginger Crop details

ಪೋಷಕಾಂಶ ನಿರ್ವಹಣೆಯಲ್ಲಿ ತಪ್ಪು ಕ್ರಮಗಳು – ಮಣ್ಣು ಪರೀಕ್ಷೆ ಮಾಡಿಸದೆಯೇ ರಸಗೊಬ್ಬರ ನೀಡುತ್ತಿರುವುದು, ಅತಿಯಾದ ಸಾರಜನಕ ರಸಗೊಬ್ಬರಗಳ ಬಳಕೆ, ಕಡಿಮೆ ಪ್ರಮಾಣದ ಪೊಟ್ಯಾμï ಬಳಕೆ, ಗೊಬ್ಬರಗಳನ್ನು ಬೆಳೆಯ ಬೇಡಿಕೆಗೆ ತಕ್ಕಂತೆ ನೀಡದಿರುವುದು, ಲಘುಪೆÇೀಷಕಾಂಶಗಳ ಅಸಮರ್ಪಕ ಬಳಕೆ, ಔಷಧಗಳೊಂದಿಗೆ ಪೋಷಕಾಂಶಗಳನ್ನು ಮಿಶ್ರಣ ಮಾಡಿ ಸಿಂಪಡಿಸುತ್ತಿರುವುದು.

ಸೂಕ್ತ ಪೋಷಣೆ ದೊರೆಯದೆ ಶುಂಠಿ ಬೆಳೆ ರೋಗಕ್ಕೆ ಸುಲಭವಾಗಿ ತುತ್ತಾಗುತ್ತಿರುವುದು ಕಂಡುಬಂದಿದೆ. ತೋಟಗಾರಿಕೆ ವಿಶ್ವವಿದ್ಯಾನಿಲಯ ಸರ್ವೇಕ್ಷಣೆ ಸಮಯದಲ್ಲಿ ಪೊಟ್ಯಾμï ಸರಿಯಾದ ಪ್ರಮಾಣದಲ್ಲಿ ಕೊಡದಿರುವ ಅಥವಾ ತೀರಾ ಕಡಿಮೆ ಕೊಟ್ಟಿರುವ ತಾಕುಗಳಲ್ಲಿ ಎಲೆಚುಕ್ಕೆ ರೋಗ ಮೇಲ್ನೋಟಕ್ಕೆ ಹೆಚ್ಚಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ: Bele Vime Status-ನಿಮ್ಮ ಮೊಬೈಲ್ ನಂಬರ್ ಬಳಸಿ ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯಿರಿ!

Control Method-ನಿರ್ವಹಣೆ ಹೇಗೆ?

ಮುಂಜಾಗ್ರತೆಯಾಗಿ (ರೋಗ ಬರುವ ಮೊದಲು) – ಶೇ. 1 ರ ಬೋರ್ಡೋ ದ್ರಾವಣ, ಮ್ಯಾಂಕೋಝೆಬ್ (2 ಗ್ರಾಂ ಪ್ರತಿ ಲೀಟರ್ ನೀರಿಗೆ) ಅಥವಾ ತಾಮ್ರದ ಆಕ್ಸಿ ಕ್ಲೋರೈಡ್ (3 ಗ್ರಾಂ ಪ್ರತಿ ಲೀಟರ್ ನೀರಿಗೆ) ಗಳನ್ನು 12-15 ದಿನಗಳ ಅಂತರದಲ್ಲಿ ಸಿಲಿಕಾನ್ ಆಧಾರಿತ ಅಂಟು (ಗಮ್) ಸೇರಿಸಿ ಸಿಂಪಡಿಸಬೇಕು.

ಈಗಾಗಲೇ ರೋಗ ಬಂದಿರುವ ಕಡೆ ಮಳೆ ಇಲ್ಲದಿರುವಾಗ (ಕನಿಷ್ಟ 4-5 ಗಂಟೆ) ಪೆÇ್ರೀಪಿಕೋನಝೋಲ್ 25 ಇ.ಸಿ. (1 ಮಿಲೀ ಪ್ರತಿ ಲೀಟರ್ ನೀರಿಗೆ) ಅಥವಾ ಹೆಕ್ಸಾಕೋನಝೋಲ್ 5 ಇ.ಸಿ. (1 ಮಿಲೀ ಪ್ರತಿ ಲೀಟರ್ ನೀರಿಗೆ) ಅಥವಾ ಟೆಬುಕೋನಝೋಲ್ 38.39 ಎಸ್ಸಿ (1 ಮಿಲೀ ಪ್ರತಿ ಲೀಟರ್ ನೀರಿಗೆ) ಅಂತವ್ರ್ಯಾಪಿ ಶಿಲೀಂಧ್ರನಾಶಕಗಳನ್ನು ಅಥವಾ ಕಾಬೆರ್ಂಡೈಝಿಂ 12 % + ಮ್ಯಾಂಕೋಝೆಬ್ 63% (2 ಗ್ರಾಂ ಪ್ರತಿ ಲೀಟರ್ ನೀರಿಗೆ) 8-10 ದಿನಗಳ ಅಂತರದಲ್ಲಿ ಉತ್ತಮ ಗುಣಮಟ್ಟದ ಅಂಟು ಬೆರೆಸಿ ಸಿಂಪಡಿಸಬೇಕು.

ಇದನ್ನೂ ಓದಿ: PM Kisan-ಪಿಎಂ ಕಿಸಾನ್ ಅಪ್ಲಿಕೇಶನ್ ಸ್ಕಾಮ್! ನಿಮ್ಮ ಹಣಕ್ಕೆ ಕನ್ನ!

Ginger

ಮುಂದುವರೆದು, ಬಹಳಷ್ಟು ಕೃಷಿಕರು ರೋಗ ಬಂದ ನಂತರ ಟೆಬುಕೋನಝೋಲ್ 50 % + ಟ್ರೈಫ್ಲಾಕ್ಸಿಸ್ಟ್ರಾಬಿನ್ 25 % ಡಬ್ಲ್ಯೂಜಿ ಸಿಂಪಡಿಸಿ ಉತ್ತಮ ಫಲಿತಾಂಶ ಪಡೆದಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದನ್ನು ಸಂಶೋಧನೆಯಿಂದ ದೃಢಪಡಿಸಬೇಕಿದೆ. ಆದಾಗ್ಯೂ ಸ್ಟ್ರಾಬುಲಿನ್ ಗುಂಪಿಗೆ ಸೇರಿರುವ ಶಿಲೀಂಧ್ರನಾಶಕಗಳನ್ನು ಪದೇ ಪದೇ ಬಳಕೆ ಮಾಡುವುದರಿಂದ ರೋಗಾಣು ಅಂಥಹ ಶಿಲೀಂಧ್ರನಾಶಕಗಳಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ಅವುಗಳ ಪುನರಾವರ್ತಿತ ಬಳಕೆ ಮಾಡದಿರಲು ತಿಳಿಸಲಾಗಿದೆ.

ವಿಶೇಷ ಸೂಚನೆ:

ಆಗ್ರೋ ಕೇಂದ್ರಗಳಿಗೆ ಔಷಧ ಖರೀದಿಗೆ ಹೋಗುವ ಮೊದಲು ತಜ್ಞರ ಸಲಹೆ ಪಡೆದು ಅವರು ಶಿಫಾರಸು ಮಾಡುವ ಶಿಲೀಂಧ್ರನಾಶಕಗಳನ್ನು ಮಾತ್ರ ಬಳಸಲು ರೈತರಿಗೆ ಸೂಚಿಸಲಾಗಿದೆ (ಕೆಲವು ಡೀಲರ್‍ಗಳು, ಖಾಸಗಿ ಕಂಪನಿಗಳ ಪ್ರತಿನಿಧಿಗಳು ಅಥವಾ ನಕಲಿ ಕೃಷಿ ತಜ್ಞರುಗಳು ಕೃಷಿಕರಿಗೆ ಅವಶ್ಯಕತೆಯಿಲ್ಲದ ಉತ್ಪನ್ನಗಳನ್ನು ಶಿಫಾರಸು ಮಾಡುತ್ತಿರುವುದು ಸರ್ವೇಕ್ಷಣಾ ತಂಡದ ಗಮನಕ್ಕೆ ಬಂದಿರುತ್ತದೆ).

ಇದನ್ನೂ ಓದಿ: Safety precautions-ಕೀಟನಾಶಕ ಸಿಂಪಡಿಸಿದ ತರಕಾರಿ ಸೇವಿಸಿ ಒಂದೇ ಕುಟುಂಬದ 3 ಸಾವು!

ಹೆಚ್ಚಿನ ಮಾಹಿತಿಗಾಗಿ(Bagalkot Horticulture College Helpline Numbers) ಕೃಷಿಕರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಸ್ಥೆಗಳು ಅಥವಾ ತಜ್ಞರ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು:

  • ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು ಡಾ. ಕಿರಣ್ ಕುಮಾರ್ ಮೊ.ಸಂ. 9740172729,
  • ತೋಟಗಾರಿಕೆ ಮಹಾವಿದ್ಯಾಲಯ, ಬೆಂಗಳೂರು, ಡಾ. ಹರೀಶ್ ಬಿ ಎಸ್, ಮೊ.ಸಂ. 9480557634,
  • ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹಾಸನ, ಡಾ. ಮಹೇಶ್ ವೈ.ಎಸ್., ಮೊ. ಸಂ. 89713 83036,
  • ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ದೇವಿಹೊಸೂರು, ಡಾ. ರವಿಕುಮಾರ್, ಮೊ.ಸಂ. 9886504026,
  • ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಶಿರಸಿ, ಡಾ. ಪ್ರಸಾದ್ ಪಿ.ಎಸ್., ಮೊ.ಸಂ. 9901066699 ಅಥವಾ
  • ತೋಟಗಾರಿಕಾ ಮಹಾವಿದ್ಯಾಲಯ, ಬೀದರ್, ಡಾ. ಅಬ್ದುಲ್ ಕರೀಮ್, ಮೊ.ಸಂ. 8792698087 ಇವರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: Nano DAP-ನಾನ್ಯೋ ಡಿ.ಎ.ಪಿ ಬಳಸುವ ಮುನ್ನ ತಪ್ಪದೇ ಈ ಮಾಹಿತಿ ತಿಳಿಯಿರಿ!

ರೋಗದ ತೀವ್ರತೆಯನ್ನು ಮನಗಂಡಿರುವ ತೋಟಗಾರಿಕೆ ವಿಶ್ವವಿದ್ಯಾನಿಲಯ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಶೋಧನೆಯನ್ನು ನಡೆಸಿ ಸೂಕ್ತ ಮತ್ತು ಸಮಗ್ರ ನಿರ್ವಹಣಾ ಕ್ರಮಗಳನ್ನು ಅಭಿವೃದ್ಧಿಪಡಿಸಲಿದೆ. ಅμÉ್ಟೀ ಅಲ್ಲದೆ ಶುಂಠಿ ಕೃಷಿಕರಿಗೆ ಅವಶ್ಯವಿರುವ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ತೋಟಗಾರಿಕಾ ವಿಶ್ವವಿದ್ಯಾನಿಲಯ ದಕ್ಷಿಣವಲಯದ ಸಹ-ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರಾದ ಡಾ. ಜಗದೀಶ್ ಎಸ್.ಎಲ್ ರವರು ತಿಳಿಸಿದ್ದಾರೆ.

ಸಮೀಕ್ಷಾ ತಂಡ ರಚಿಸಿ, ಬಾಧಿತ ಜೆಲ್ಲೆಗಳಲ್ಲಿ ಅಧ್ಯಯನ ನಡೆಸಿ ಕೃಷಿಕರಿಗೆ ಸೂಕ್ತ ವೈಜ್ಞಾನಿಕ ನಿರ್ವಹಣಾ ಕ್ರಮಗಳನ್ನು ತಲುಪಿಸಲು ಮಾರ್ಗದರ್ಶನ ನೀಡಿದ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕರಾದ ಡಾ. ಬಿ. ಫಕೃದ್ದೀನ್ ಹಾಗೂ ವಿಜ್ಞಾನಿಗಳನ್ನು ಸದಾ ಹುರಿದುಂಬಿಸಿ ಕೃಷಿಕರ ಸೇವೆಯಲ್ಲಿ ತೊಡಗುವಂತೆ ಉತ್ತೇಜಿಸುವ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ವಿಷ್ಣುವರ್ಧನ ಅವರಿಗೆ ಸಮೀಕ್ಷಾ ತಂಡದ ಸದಸ್ಯರು ಹಾಗೂ ಬಾಧಿತ ಕೃಷಿಕರು ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: